ವಿಜಯಸಾಕ್ಷಿ ಸುದ್ದಿ, ಡಂಬಳ: ರಸ್ತೆ ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಜನಾನುರಾಗಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕ ಜಿ.ಎಸ್. ಪಾಟೀಲರು ತಾಂಡಾಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಿರುವುದು ಸಂತೋಷ ತಂದಿದೆ ಎಂದು ಶಿವಾಜಿನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಗಣೇಶ ರಾಠೋಡ ಹೇಳಿದರು.
ಡಂಬಳ ಹೋಬಳಿ ಸಿಂಗಟರಾಯನಕೇರಿ ತಾಂಡಾ ಶಿವಾಜಿನಗರದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನ 180 ಲಕ್ಷ ರೂಗಳ ವೆಚ್ಚದಲ್ಲಿ ಬೆಂಚಿ ರಸ್ತೆ 2 ಕಿ.ಮೀ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಸಿಂಗ ರಾಠೋಡ, ಗ್ರಾ.ಪಂ ಸದಸ್ಯರಾದ ಮೀರಾಬಾಯಿ ಪಾಂಡಪ್ಪ ಮೇಘಾವತ್, ಸರೋಜಾ ಪ್ರಕಾಶ ಪೂಜಾರ, ಮೀರವ್ವ ಲಮಾಣಿ, ಲಕ್ಷ್ಮಣ ಚೌಹಾಣ, ರಾಜಶೇಖರ ಪವಾರ, ಗ್ರಾಮದ ಹಿರಿಯರಾದ ದೇವಪ್ಪ ಹೋಬಪ್ಪ ನಾಯಕ, ಶಿವಪ್ಪ ಚನ್ನಪ್ಪ ರಾಠೋಡ, ಧರ್ಮಸಿಂಗ್ ರಾಮಪ್ಪ ರಾಠೋಡ, ಧರ್ಮಸಿಂಗ್ ಗುರುನಾಥ ರಾಠೋಡ, ಲಕ್ಷ್ಮಣ ನಾಯಕ, ದೇವಪ್ಪ ನಾಯಕ, ಗುತ್ತಿಗೆ ಕಾಮಗಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ದು ಪಾಟೀಲ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗುರಣ್ಣ ನಾಯಕ, ತಾವರಪ್ಪ ಲಮಾಣಿ, ಶಂಕರ ಪೂಜಾರ, ಸುರೇಶ ಪವಾರ, ಶಿವಪ್ಪ ಲಮಾಣಿ, ರಾಜು ರಾಠೋಡ, ಮರಿಯಪ್ಪ ರಾಠೋಡ, ವಾಸು ಲಮಾಣಿ, ಅಪ್ಪಣ್ಣ ನಾಯಕ, ಉಮೇಶ ನಾಯಕ, ಚಂದ್ರಶೇಖರ ನಾಯಕ, ರಮೇಶ ನಾಯಕ, ಲೋಕಪ್ಪ ಲಮಾಣಿ, ಲಕ್ಷ್ಮಣ ಭೀಮಸಿಂಗ ಲಮಾಣಿ, ವಿಷ್ಣು ಪವಾರ್, ವಿಶ್ವ ನಾಯಕ, ಠಾಕ್ರಪ್ಪ ರಾಠೋಡ, ಗಣೇಶ ಚೌಹಾಣ, ಕುಬೇರಪ್ಪ ಲಮಾಣಿ ಇತರರು ಇದ್ದರು.