ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಕ್ರಿಕೆಟ್ ಕಪ್ ಪಂದ್ಯಾವಳಿ ಕಲಬುರಗಿಯಲ್ಲಿ ನಡೆಯಲಿದೆ. ನವೆಂಬರ್ 3 ರಂದು ಬೆಳಿಗ್ಗೆ 10 ಗಂಟೆಗೆ ಎನ್ ವಿ ಕಾಲೇಜ್ ಮೈದಾನದಲ್ಲಿ ಪಂದ್ಯ ಉದ್ಘಾಟನೆಯಾಗಲಿದೆ.. KKRDB ಅಧ್ಯಕ್ಷ ಹಾಗು ಜೇವರ್ಗಿ ಶಾಸಕ ಡಾ ಅಜಯ್ ಸಿಂಗ್ ಪಂದ್ಯಕ್ಕೆ ಚಾಲನೆ ಕೊಡಲಿದ್ದಾರೆ.
Advertisement
ಸತತ 19 ದಿನಗಳ ಕಾಲ ಹಲವು ತಂಡಗಳು ಪಂದ್ಯದಲ್ಲಿ ಭಾಗಿಯಾಗಲಿದ್ದು 22 ರಂದು ಸಮಾರೋಪ ನಡೆಯಲಿದೆ.ಯಾರೇ ಭಾಗಿಯಾಗಲು ನೊಂದಣಿ ಉಚಿತವಾಗಿದೆ.. ಗೆದ್ದ ಎರಡು ತಂಡಗಳಿಗೆ ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ.
ಹಳ್ಳಿ ಯುವಕರಲ್ಲಿ ಕ್ರೀಡಾ ಮನೋಭಾವನೆ ಹೆಚ್ಚಿಸಲು ಪಂದ್ಯ ಹಮ್ಮಿಕೊಳ್ಳಲಾಗಿದೆ ಅಂತ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಪ್ರವೀಣ್ ಹರವಾಳ್ & ಕಿರಣ್ ದೇಶಮುಖ್ ತಿಳಿಸಿದ್ದಾರೆ..