ಪ್ರೊ. ಸಿದ್ಧು ಯಾಪಲಪರವಿ ಅವರಿಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಬಾಲ್ಕಿ ಚನ್ನಬಸವ ಆಶ್ರಮ ಪರಿಸರದಲ್ಲಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಕೊಡಮಾಡುವ `ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರ ಸಾಹಿತ್ಯ ಪ್ರಶಸ್ತಿ-2025’ಕ್ಕೆ ಭಾಜನರಾದ ಗದುಗಿನ ವಚನ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಸಿದ್ಧು ಯಾಪಲಪರವಿ ಇವರನ್ನು ಬಸವಳದ-ಬಸವಕೇಂದ್ರ-ಲಿAಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

Advertisement

ಈ ಸಂದರ್ಭದಲ್ಲಿ ಶರಣರಾದ ಕೆ.ಎಸ್. ಚೆಟ್ಟಿ, ಎಸ್.ಎಂ. ಕವಳಿಕಾಯಿ, ಎಂ.ಬಿ. ಲಿಂಗಧಾಳ, ಎನ್.ಎಚ್. ಹಿರೇಸಕ್ಕರಗೌಡ್ರ, ಪ್ರಕಾಶ ಅಸುಂಡಿ, ಬಸವರಾಜ ಹಿರೇಹಡಗಲಿ, ಎಸ್.ಎ. ಮುಗದ, ಶಿವನಗೌಡ ಗೌಡರ, ಶರಣೆಯರಾದ ಡಾ. ಗಿರಿಜಾ ಹಸಬಿ, ಗೌರಕ್ಕ ಬಡಿಗಣ್ಣವರ, ಗಂಗಮ್ಮ ಹೂಗಾರ, ಪದ್ಮಾವತಿ ಹಂಜಗಿ ಮುಂತಾದವರು ಇದ್ದರು.


Spread the love

LEAVE A REPLY

Please enter your comment!
Please enter your name here