ವಿಜಯಸಾಕ್ಷಿ ಸುದ್ದಿ, ಗದಗ : ಕೋಟುಮಚಗಿ ಗ್ರಾಮದ ಶಕುಂತಲಾ ನಂದಿಕೋಲಮಠ ಎಂಬುವರ ಜಮೀನಿನಲ್ಲಿ ಪತ್ತೆಯಾಗಿದ್ದ ಚಿಗರೆ ಮರಿಯನ್ನು ರೈತ ಕಾರ್ಮಿಕ ಬಸಯ್ಯ ನಂದಿಕೋಲಮಠ ರಕ್ಷಿಸಿ ಗದಗ ಅರಣ್ಯ ಇಲಾಖೆಗೆ ಹಸ್ತಾಂತರರಿಸಿದ್ದಾರೆ.
Advertisement
ಅಧಿಕಾರಿ ಮಂಜುನಾಥ ಮೇಗಲಮನಿ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ, ಇಲಾಖೆಯೊಂದಿಗೆ ರೈತರು, ಸಾರ್ವಜನಿಕರ ಸಹಕಾರ ಅತ್ಯಗತ್ಯ. ವನ್ಯಜೀವಿಗಳು ಪತ್ತೆಯಾದಲ್ಲಿ ನೇರವಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಸಿ ಹಸ್ತಾಂತರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೋಟುಮಚಗಿ ಯುವ ಮುಖಂಡ ರಾಜು ಗಾಣಿಗೆರ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.