ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳರನ್ನು ಪಕ್ಷದಿಂದ ಉಚ್ಛಾಟಿಸಿರುವುದನ್ನು ಖಂಡಿಸಿ ವೀರಶೈವ ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ಸಿದ್ದಣ್ಣ ಬಂಡಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಂಚಮಸಾಲಿ ಸಮಾಜದ ತಾಲೂಕಾ ಉಪಾಧ್ಯಕ್ಷ ವಿಶ್ವನಾಥ ಜಿಡ್ಡಿಬಾಗಲ, ಚಂಬಣ್ಣ ಚವಡಿ, ಮಹೇಶ ಪಲ್ಲೇದ, ಪಂಚಸೈನ್ಯ ರಾಜ್ಯಾಧ್ಯಕ್ಷ ರುದ್ರಗೌಡ ಸೊಲಪ್ಪಗೌಡ್ರ, ಗಜೇಂದ್ರಗಡ ತಾಲೂಕು ಯುವ ಘಟಕದ ಅಧ್ಯಕ್ಷ ವೀರೇಶ ಸಂಗಮದ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಉಪಾಧ್ಯಕ್ಷ ಬಸವರಾಜ್ ಗಡ್ಡೆಪ್ಪನವರ, ಅನಿಲ ಮುಳ್ಳಾಳ, ಸಂಗಮೇಶ ಗೊಂದಿ, ಮಹಾಂತೇಶ ಬನ್ನಿಗೋಳ, ಪ್ರಭು ಚವಡಿ, ಶರಣಪ್ಪ ಹಿರೇಕೋಪ್ಪ, ಬಸವರಾಜ ಮೂಲಿಮನಿ, ಈಶಪ್ಪ ಮ್ಯಾಗೇರಿ, ರುದ್ರೇಶ ಕೊಟಗಿ, ಭೀಮಣ್ಣ ಮ್ಯಾಗೇರಿ, ಮುತ್ತಣ್ಣ ಮೇಟಿ, ರುದ್ರೇಶ ಕೋರಿ, ಕಳಕಪ್ಪ ಅಬ್ಬಿಗೇರಿ, ಮುತ್ತಪ್ಪ ಚಳಿಗೇರಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಮತ್ತು ಗಜೇಂದ್ರಗಡ, ರೋಣ ತಾಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.