ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಆರ್ಸಿಬಿ ಕ್ರಿಕೆಟ್ ತಂಡ ಕಪ್ ಗೆದ್ದ ಹಿನ್ನೆಲೆಯಲ್ಲಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದನ್ನು ಖಂಡಿಸಿ, ಇದರ ನೈತಿಕ ಹೊಣೆ ಹೊತ್ತು ಸಿಎಂ ಹಾಗೂ ಡಿಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ ರಾಜ್ಯ ಸಹಕಾರಿ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಜಿ.ನಂಜನಗೌಡ್ರು, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಎಸ್.ಪಿ. ಲಿಂಬ್ಯನಾಯ್ಕ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿವಿಹಳ್ಳಿ ಮಂಜುನಾಥ ಮಾತನಾಡಿಸರು.
ಜಿಲ್ಲಾ ಕಾರ್ಯದರ್ಶಿ ಕುಸುಮಾ ಜಗದೀಶ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೆನ್ನನಗೌಡ, ಲಿಂಗಾನಂದ, ಮೈದುರ್ ಮಲ್ಲಿಕಾರ್ಜುನ, ಜವಳಿ ಮಹೇಶ್, ಪ್ರಾಣೇಶ್, ಬೂದಿ ನವೀನ್, ಶ್ರೀಪತಿ, ಟಿ.ಪಿ. ಮಂಜನಾಯ್ಕ್, ಹುಣಸಿಹಳ್ಳಿ ಪ್ರಕಾಶ್, ಎಸ್.ಆರ್. ಅಶೋಕ್, ಕಡಕೋಳ ಐ.ಸಿದ್ದನಗೌಡ, ಸಾಸಿವೆಹಳ್ಳಿ ಹಾಲೇಶ್, ಬಂಡ್ರಿ ಗುರು ಬಸವರಾಜ್, ಜಟ್ಯಪ್ಪ, ಗೌಳಿ ಎಲ್ಲಪ್ಪ, ಶೃಂಗಾರ ತೋಟಪ್ರಭು, ಕಣುವಿಹಳ್ಳಿ ನಿಂಗಪ್ಪ ಶಿವರಾಜ ಗಿರೀಶ್, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಸಪ್ನ ಮಲ್ಲಿಕಾರ್ಜುನ, ಜಯಲಕ್ಷ್ಮೀ, ಹಳ್ಳಿಕೆರೆ ಮಂಜುಳಾ, ಕೆ. ಮಂಜುಳಾ, ರೋಜಾ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.