ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿವೇಕಾನಂದ ಬಡಾವಣೆ (ರಾಜೀವಗಾಂಧಿ ನಗರ), ಶ್ರೀ ಸಾಯಿಬಾಬಾ ಮಂದಿರದ ಎದುರಿಗೆ ಹಾತಲಗೇರಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಎ. ನಾಗರಾಜ ಗುರುಸ್ವಾಮಿಗಳ 45 ವರ್ಷಗಳ ಅವಿಸ್ಮರಣೀಯ ಸೇವೆ ಮತ್ತು 26 ವರ್ಷಗಳಿಂದ ನಿರಂತರ ಓಂ ಶ್ರೀ ಅಯ್ಯಪ್ಪಸ್ವಾಮಿಯ ನಿತ್ಯ ಪೂಜೆ ಗುರುಸ್ವಾಮಿಗಳು ಹಾಗೂ ಶಿಷ್ಯ ಬಳಗದಿಂದ ನಡೆಸಿಕೊಂಡು ಬಂದಿದೆ.
ಈ ವರ್ಷ ಜ. 7ರಂದು ಮಸಾರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಎ. ನಾಗರಾಜ ಗುರುಸ್ವಾಮಿಗಳು ಹಾಗೂ ಶಿಷ್ಯ ಬಳಗದ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಮೆರವಣಿಗೆಯು ಜ್ಯೋತಿ ಹಾಗೂ ಪೂರ್ಣಕುಂಭದೊಂದಿಗೆ ಜರುಗಿತು. ಜ. 8ರಂದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ಜರುಗಿತು. ಜ. 9ರಂದು ಬೆಳಿಗ್ಗೆ 9 ಗಂಟೆಗೆ ಇರುಮುಡಿ ಕಟ್ಟುವ ಕಾರ್ಯಕ್ರಮ ಜರುಗಿತು.



