ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯ ಶ್ರೇಷ್ಠ ಪರಂಪರೆಯ ಪ್ರತೀಕವಾಗಿದೆ. ಅದಕ್ಕೆ ಪುಲಿಗೆರೆಯ ತಿರುಳುಗನ್ನಡದ ಕೊಡುಗೆ ಅಪಾರವಾದದು. ಸಾಹಿತ್ಯ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಸಾಹಿತ್ಯವು ಒಂದು ಭಾಷೆಯ ಬೌದ್ಧಿಕ, ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರೀ ಸಹಸ್ರಾರ್ಜುನ ಬಿಇಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಸಾಪ ಶಿಗ್ಲಿ ಹೋಬಳಿ ಘಟಕದ ಅಧ್ಯಕ್ಷ ರಾಜಣ್ಣ ರಜಪೂತ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ದತ್ತಿಯಾದ `ಜನಪದ ಸಾಹಿತ್ಯ ಮತ್ತು ಹಾಸ್ಯ’ ಕುರಿತು ಮಾತನಾಡಿ, ಜನಪದ ಸಾಹಿತ್ಯ ಅದು ರೈತರ ಸಾಹಿತ್ಯ. ಮಹಿಳೆಯರ ಸಾಹಿತ್ಯ. ಗ್ರಾಮೀಣರ ಸಾಹಿತ್ಯ. ಅದು ಎಲ್ಲ ಸಾಹಿತ್ಯದ ತಾಯಿ ಎಂದರು.
ಹಿರಿಯ ಚಿಂತಕ ದೇವಣ್ಣ ಬಳಿಗಾರ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ `ಸುವರ್ಣ ಸಿರಿ’ ಪ್ರಶಸ್ತಿ ಸ್ವೀಕೃತ ಸಾಹಿತಿ ಸಿ.ಆರ್. ಗೋಕಾವಿ ಮಾತನಾಡಿದರು.
ಕಸಾಪ ತಾಲೂಕಾ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ತಾಲೂಕ ಘಟಕ ಈಗಾಗಲೇ 151 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ಮುಂದೆ ಸಾಗುತ್ತಿದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ ಅಂಗಡಿ, ಮಹೇಶ ಲಿಂಬಯ್ಯಸ್ವಾಮಿಮಠ ಮಾತನಾಡಿದರು.
ಮಹಾವಿದ್ಯಾಲಯದ ಅಧ್ಯಕ್ಷ ವಸಂತಸಾ ಖೋಡೆ, ಕಾರ್ಯದರ್ಶಿ ಕೃಷ್ಣಾಸಾ ಖೋಡೆ, ಸಾಹಿತಿ ಸಿ.ಜಿ. ಹಿರೇಮಠ, ಡಿ.ಎಫ್. ಪಾಟೀಲ, ಮುರಳೀಧರ ಹುಬ್ಬಳ್ಳಿ, ಕೋಟಿಮಠ, ಸುಶೀಲಾ ಹಿರೇಮಠ, ಸುಲೋಚನಾ ಜವಾಯಿ, ವಿ.ಎಮ್. ಹೂಗಾರ, ಉಪನ್ಯಾಸಕ ವರ್ಗ, ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಸೇರಿ ಪದಾಧಿಕಾರಿಗಳು ನಿರ್ವಹಿಸಿದರು.
ಲಲಿತಾ ಮತ್ತು ಪ್ರೊ. ಸಿ.ವಿ. ಕೆರಿಮನಿ ದತ್ತಿ ವಿಷಯವಾದ `ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ‘ ವಿಷಯದ ಕುರಿತು ಮಾತನಾಡಿದ ಶಿಕ್ಷಕಿ ವೀಣಾ ಜಾದವ, ಇಡೀ ಮನುಕುಲ ಸಾವಿತ್ರಿಬಾಯಿ ಪುಲೆ ಅವರಿಗೆ ಋಣಿಯಾಗಿರಬೇಕು. ಇಂದು ಮಹಿಳೆಯರ ಬಗ್ಗೆ ಮಾತನಾಡುವ ನಾವೆಲ್ಲ ಅಂದಿನ ಪರಿಸ್ಥಿತಿಯನ್ನ ನೆನೆಯಬೇಕು. ಅಂತಹ ಕನಿಷ್ಠ ಪರಿಸ್ಥಿತಿಯನ್ನು ಮೀರಿ ಮಹಿಳೆಯರಿಗೆ ನ್ಯಾಯ ಒದಗಿಸಿಕೊಟ್ಟ ಕೀರ್ತಿ ಸಾವಿತ್ರಿಬಾಯಿ ಅವರಿಗೆ ಸಲ್ಲುತ್ತದೆ ಎಂದರು.