ಬೆಂಗಳೂರು: ಗೊಂಬೆ ಮಾಸ್ಕ್ ಧರಿಸಿ ಪುಂಡಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ.
Advertisement
ರಾಜಗೋಪಾಲನಗರ ಪೊಲೀಸರಿಂದ ಆರು ಮಂದಿಯನ್ನು ಬಂಧಿಸಲಾಗಿದೆ. ಏರಿಯಾದಲ್ಲಿ ಹವಾ ಮೈಂಟೇನ್ ಮಾಡಲು ಈ ಯುವಕರ ಗುಂಪು ಕೃತ್ಯ ಎಸಗಿದ್ದಾರೆ. ಆರೋಪಿಗಳು, ಕಂಠ ಪೂರ್ತಿ ಕುಡಿದು ರಾಡ್ ಮತ್ತು ಲಾಂಗ್ ನಿಂದ ಕಾರು ಗ್ಲಾಸ್ ಹೊಡೆದಿದ್ದರು.
ಬೈಕ್ ಗಳಲ್ಲಿ ಬಂದು ತೂರಾಡಿಕೊಂಡು ಮನಬಂದಂತೆ ವರ್ತನೆ ಮಾಡಿ ಎಸ್ಕೇಪ್ ಆಗಿದ್ದರು. ಸ್ಥಳಕ್ಕೆ ಶಾಸಕ ಮುನಿರತ್ನ ಭೇಟಿ ಕೊಟ್ಟು ಪರಿಶೀಲನೆ ಮಾಡಿದರು. ಪಕ್ಕದ ಏರಿಗಳಿಂದ ಬಂದು ಕೃತ್ಯ ಎಸಗಿ ಬೇರೆಡೆ ಪ್ರತ್ಯೇಕವಾಗಿದ್ದುಕೊಂಡು ತಲೆಮರೆಸಿಕೊಂಡಿದ್ರು.
ಇದೀಗ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.