ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಲ್ಪವಯಿ ಹಿಂದೂ ಬಾಲಕನನ್ನು ಮತಾಂತರಗೊಳಿಸುವ ಉದ್ದೇಶದಿಂದ ಅಪಹರಿಸಿ ಜೀತಕ್ಕೆ ಇಟ್ಟುಕೊಂಡ ಮುಸ್ಲಿಂ ಸಮಾಜದ ಯುವಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ತಹಸೀಲ್ದಾರ ಧನಂಜಯ ಎಂ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಜಿಲ್ಲೆಯಾದ್ಯಂತ ಮುಗ್ಧ ಹಿಂದೂಗಳನ್ನು ಬಲವಂತದಿಂದ, ಪುಸಲಾಯಿಸಿ ಮತಾಂತರಗೊಳಿಸುವ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇದಕ್ಕೆ ಕಡಿವಾಣ ಹಾಕುವ ಕಾರ್ಯಗಳು ನಡೆಯುತ್ತಿಲ್ಲ. ಹಿಂದೆ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗಿ ಮತಾಂತರ ಮಾಡಿರುವ ಘಟನೆಗಳು ನಡೆದಿದ್ದು, ಇದೀಗ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಪ್ರಾಪ್ತ ಬಾಲಕನನ್ನು ಪಟ್ಟಣದ ಮುಸ್ಲಿಂ ಯುವಕ ಅಪಹರಿಸಿ ಕಳೆದ 45 ದಿನಗಳಿಂದ ಈ ಬಾಲಕನನ್ನು ಹುಬ್ಬಳ್ಳಿಯಲ್ಲಿ ಒತ್ತಾಯದಿಂದ ಹೋಟೆಲ್ ಒಂದರಲ್ಲಿ ಜೀತಕ್ಕಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯವೆಸಗಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡುವದಾಗಿ ಹೇಳಿದರು.
ತಹಸೀಲ್ದಾರ ಧನಂಜಯ ಎಂ ಮನವಿ ಸ್ವೀಕರಿಸಿದರು. ಈ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರಾದ ಬಾಲಕನ ತಂದೆ ಶರಣಪ್ಪ ಗಣಧಿನಿ, ತಾಯಿ ರೂಪಾ ಗಣಧಿನಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಹರೀಶ ಗೋಸಾವಿ, ಬಸವರಾಜ ಕಲ್ಲೂರ, ಕುಮಾರ ಕಣವಿ, ಆದೇಶ ಸವಣੂਰ, ಪ್ರಾಣೇಶ ವ್ಯಾಪಾರಿ, ಸೋಮು ಗೌರಿ, ವಿನಾಯಕ ಸಪ್ಲಡಂ, ಕಿರಣ ಮಹಾಂತಶೆಟ್ಟರ, ವಿಶಾಲ ಬಟಗುರ್ಕಿ, ಯಶವಂತ ಬಳ್ಳಾರಿ, ಸಂತೋಷ ಬೋಮಲೆ ಮುಂತಾದವರು ಹಾಜರಿದ್ದರು.


