ಪುಟ್ಟರಾಜರು ಅಂಧ-ಅನಾಥರ ಬಾಳಿನ ದೇವರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಪುಟ್ಟರಾಜ ಕವಿ ಗವಾಯಿಗಳು ಅಂಧ-ಅನಾಥರ ಬಾಳಿನ ದೇವರು. ನಾಡಿಗೆ ಬೆಳಕು ಬೀರಿ ಸಂಗೀತದ ಸಿರಿಯನ್ನು ಮನೆ-ಮನಕ್ಕೆ ತಲುಪಿಸಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕೀರ್ತಿಯನ್ನು ಹೆಚ್ಚಿಸಿದ ಪುಣ್ಯಾತ್ಮರು ಎಂದು ಸಖಿ-ಸಹೇಲಿ ಮಹಿಳಾ ಸಂಘಟನೆಯ ಗದಗ-ಜಿಲ್ಲಾ ನಿಯೋಜಿತ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.

Advertisement

ಅವರು ರವಿವಾರ ರಾಜ್ಯ ಜೇಂಟ್ಸ್ ವೆಲ್‌ಫೇರ್ ಪೌಂಡೇಶನ್‌ನ ಗದಗ ಜಿಲ್ಲಾ ಮಹಿಳಾ ಘಟಕ ಸಖಿ-ಸಹೇಲಿ ಸಂಘನೆಯಿಂದ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜರ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಆಶಾ ಪಟ್ಟಣಶೆಟ್ಟಿ ಮಾತನಾಡಿ, ಸಂಗೀತ ಸಾಹಿತ್ಯಕ್ಕೆ ವೀರೇಶ್ವರ ಪುಣ್ಯಾಶ್ರಮ ನೀಡಿದ ಕೊಡುಗೆ ಅಪಾರ. ಇಲ್ಲಿ ವಿದ್ಯಾರ್ಜನೆಗೈದ ಮಕ್ಕಳೆಲ್ಲರೂ ಸಾಹಿತಿಕವಾಗಿ ನಾಡಿನಾದ್ಯಂತ ಸಂಗೀತಗಾರರಾಗಿ ಜನ-ಮನ ಸೆಳೆದಿದ್ದಾರೆ. ಇವರಿಗೆ ದಾರಿ ತೋರಿದ ಆಶ್ರಮದ ಎಲ್ಲರೂ ಅಭಿನಂದನಾರ್ಹರು ಎಂದರು.

ರಾಜ್ಯ ಅಕ್ಕನಮನೆ ಪ್ರತಿಷ್ಠಾನದವರು ಕೊಡಮಾಡುವ ರಾಜ್ಯಮಟ್ಟದ ಅಕ್ಕ ಪ್ರಶಸ್ತಿಗೆ ಭಾಜನರಾದ ಗದುಗಿನ ಪಿ.ಪಿ.ಜಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ಹಿರೇಮಠರನ್ನು ಸನ್ಮಾನಿಸಲಾಯಿತು. ರೇಣುಕಾ ಪಾಟೀಲ ಪ್ರಾರ್ಥಿಸಿದರು. ರೇಖಾ ರೊಟ್ಟಿ ಸ್ವಾಗತಿಸಿದರು. ಸುಶ್ಮಿತಾ ವೆರ್ಣೇಕರ ಪರಿಚಯಿಸಿದರು. ಪ್ರಿಯಾಂಕಾ ಹಳ್ಳಿ ನಿರೂಪಿಸಿದರು. ಕೊನೆಯಲ್ಲಿ ಮಧುಶ್ರೀ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಶೋಭಾ ಹಿರೇಮಠ. ನಿವೇದಿತಾ ಹಿಡ್ಕಿಮಠ, ಗೌರಿ ಕಡೆಮನಿ, ನಿರ್ಮಲಾ ಬಸಾಪೂರ, ಅನುಪಮಾ ಕಡಗದ, ಅನ್ನಪೂರ್ಣಾ ಸೊನ್ನದ, ಅಕ್ಕಮಹಾದೇವಿ ತುಪ್ಪದ, ವಿ.ಎಲ್. ವಾಲ್ಮೀಕಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here