ಗುಣಮಟ್ಟದ ಶಿಕ್ಷಣ ಅವಶ್ಯಕ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ತುಂಬಾ ಅವಶ್ಯವಿದೆ ಎಂದು ಗದಗ ಡಿಡಿಪಿಐ ಎಸ್.ಐ. ಗೀತಾ ಕುಲಕರ್ಣಿ ಹೇಳಿದರು.

Advertisement

ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ.1ಕ್ಕೆ ಭೇಟಿ ನೀಡಿ ಮಾತನಾಡಿ, ಇಂದಿನ ಮಕ್ಕಳು ಬುದ್ಧಿವಂತರಿದ್ದು, ಅವರನ್ನು ನಾಡಿನ ಉತ್ತಮ ಪ್ರಜೆಗಳಾಗಿ ನಿರ್ಮಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಶಾಲೆ ತಾಲೂಕಿನಲ್ಲಿಯೇ ಮಾದರಿ ಶಾಲೆಯಾಗಿದ್ದು, ಉತ್ತಮ ಕಲಿಕಾ ವಾತಾವರಣ, ಗುಣಮಟ್ಟದ ಶಿಕ್ಷಕ ವೃಂದವಿದೆ. ಪ್ರತಿ ಕೊಠಡಿಯೂ ಪುಸ್ತಕದ ಭಂಡಾರವಾಗಿ ಕಂಗೊಳಿಸುತ್ತಿದ್ದು, ಮಕ್ಕಳುನ ನಿತ್ಯ ಗೋಡೆ ಬರಹಗಳನ್ನು ಓದಿದರೂ ಅವರ ಭವಿಷ್ಯ ನಿರ್ಮಾಣವಾಗುವಂತಿದೆ ಎಂದರು.

ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಂ.ಎಂ. ಮೇಗಲಮನಿ, ಎಂ.ಎಂ. ಕೊಪ್ಪಳ. ಕೆ.ಎಂ. ಹೆರಕಲ್ಲ, ಮಂಜುನಾಥ ಕಲ್ಯಾಣಮಠ, ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಎಸ್.ಎಚ್. ಉಪ್ಪಾರ, ಎಚ್.ಆರ್. ಭಜಂತ್ರಿ, ಎಸ್.ಡಿ. ಪಂಡಿತ, ವಿ.ಎಂ. ಕಂಠಿ, ಟಿ. ವೀಣಾ, ಎಸ್.ವಿ. ಹಿರೇಮಠ, ಶಭಾನಾ ಢಾಲಾಯತ, ರೇಣುಕಾ ಪರ್ವತಗೌಡರ, ಕವಿತಾ ಬಿನ್ನಾಳ, ರಾಧಾ ಭಾತಾಖಾನಿ ಇದ್ದರು.


Spread the love

LEAVE A REPLY

Please enter your comment!
Please enter your name here