ಕ್ಷುಲ್ಲಕ ಕಾರಣಕ್ಕೆ ಜಗಳ, ಗಂಭೀರ ಗಾಯಗೊಂಡ ವೃದ್ಧ ಸಾವು

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಡೆದ‌ ಗಲಾಟೆಯಲ್ಲಿ ವೃದ್ಧ ಸಾವನ್ನಪ್ಪಿದ ಘಟನೆ ನಡೆದಿದೆ. 77 ವರ್ಷದ ಕೃಷ್ಣಪ್ಪ ಮೃತ ವೃದ್ಧ.. ನವೆಂಬರ್ 16 ರಂದು ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಮೆಡಿಸಿನ್ ತರಲು ವೃದ್ಧ ಹೋಗುತ್ತಿದ್ದ. ಆಗ ಕೃಷ್ಣಪ್ಪನ ಬೈಕ್ ಗೆ ಸರ್ಫರಾಜ್ ಖಾನ್ ಡಿಕ್ಕಿ ಹೊಡಿದಿದ್ದ. ನಂತರ ಕೃಷ್ಣಪ್ಪ ಖಾನ್ ಮೇಲೆ ಕೂಗಾಡಿದ್ದರು, ಸರಿಯಾಗಿ ಬೈಕ್ ಓಡಿಸುವಂತೆ ಹೇಳಿದ್ದರು. ಆಗ ಕೃಷ್ಣನ ಮೇಲೆ ಖಾನ್ ಕಲ್ಲಿನಿಂದ ಹಲ್ಲೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದ.

Advertisement

ಸ್ಥಳಿಯರ ಸಹಾಯದಿಂದ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.. ನಂತರ ಕೃಷ್ಣಪ್ಪ ಮೃತ ಪಟ್ಟಿದ್ದರು. ನವೆಂಬರ್ 17 ರಂದು ಕೃಷ್ಣಪ್ಪನವರ ಮಗ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದ್ರು. ಆಗ ಕೃಷ್ಣಪ್ಪ ನವರ ಮೇಲೆ ಹಲ್ಲೆ ಆಗಿರೋದು ಗೊತ್ತಾಗಿತ್ತು. ಕೃಷ್ಣಪ್ಪನ ಮಗ ಸತೀಶ್ ಆಗ ವಯಾಲಿಕಾವಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಯಾಲಿಕಾವಲ್ ಪೊಲೀಸರಿಂದ ಖಾನ್ ಬಂಧನ ಮತ್ತು ಖಾನ್ ಮೇಲೆ ರೌಡಿಶೀಟರ್ ಓಪನ್ ಆಗಿದೆ. ವಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here