ಬೆಂಗಳೂರು:- ಲಾಂಗ್, ಮಚ್ಚು ದೊಣ್ಣೆಯಿಂದ ಮಾವನಿಗೆ ಸೊಸೆಯಿಂದ ಹಲ್ಲೆ ನಡೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಮಹದೇವಪುರ ಬಿಬಿಎಂಪಿ ಆಫೀಸ್ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಶೃತಿಯಿಂದ ಈ ಕೃತ್ಯ ನಡೆದಿದೆ. ಸ್ವಂತ ಮಾವನ ಮೇಲೆಯೇ ಆಸ್ತಿ ವಿಚಾರಕ್ಕೆ ಇದೇ ಶೃತಿ ಸಿನಿಮೀಯ ಶೈಲಿಯಲ್ಲಿ 5 ಗೂಂಡಾಗಳೊಂದಿಗೆ ಬಂದು ಡೆಡ್ಲಿ ಅಟ್ಯಾಕ್ ಮಾಡಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ 3 ಎಕರೆ 38 ಗುಂಟೆ ಜಾಗ ಇದೆ. ಆ ಜಾಗ ಅಟ್ಯಾಕ್ ಆದ ಪಾಪಯ್ಯ ಪ್ರಭು ಅವರ ಅಜ್ಜನ ಆಸ್ತಿಯಾಗಿದೆ. ಇದೇ ವಿಚಾರಕ್ಕೆ ಪ್ರಭು ಹಾಗೂ ಶೃತಿ ತಾಯಿ ವಜ್ರಮ್ಮ ನಡುವೆ ಜಗಳವಾಗಿತ್ತು. ಈ ವಿಚಾರ ಕೋರ್ಟ್ನಲ್ಲಿದೆ, ಕೇಸ್ ಇತ್ಯರ್ಥವಾಗಲಿ ನಂತರ ದುಡ್ಡು ಕೊಡ್ತೀನಿ ಅಂತ ಪ್ರಭು ಹೇಳಿದ್ರಂತೆ. ಆದರೆ ಶೃುತಿ ದುಡ್ಡು ಕೊಟ್ಟಿಲ್ಲ ಅಂದ್ರೆ ಬಿಡಲ್ಲ ಅಂತಾ ಹೀಗೆ ಗ್ಯಾಂಗ್ ಕಟ್ಕೊಂಡು ಬಂದು ಅಟ್ಯಾಕ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕುಟುಂಬಸ್ಥರು ಮನೆಯೊಳಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಹೊರಗಡೆ ಇದ್ದ ಬಾಲಕಿ ಮೇಲೆ ಶೃತಿ ಕುರ್ಚಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಕಳೆದ ಸೋಮವಾರ ಮಧ್ಯರಾತ್ರಿ ನಡೆದ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಭು ಕುಟುಂಬಸ್ಥರು ಪೊಲೀಸ್ರಿಗೆ ಮಾಹಿತಿ ನೀಡ್ತಿದ್ದಂತೆ ಪೊಲೀಸರು ಬರೋದನ್ನ ಕಂಡು ಶೃತಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ಸಂಬಂಧ ಶೃತಿ ಹಾಗೂ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.