ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿಜಯನಗರ ಬಡಾವಣೆಯಲ್ಲಿರುವ ಶ್ರೀವಿಶ್ವಕರ್ಮ ಭವನದ ಕಲಾ ತಪಸ್ವಿ ದಿ. ಟಿ.ಪಿ. ಅಕ್ಕಿ ವೇದಿಕೆಯಲ್ಲಿ, ನಿವೃತ್ತ ಪ್ರಾಚಾರ್ಯ ರಾಜಗೋಪಾಲ ಡಿ.ಕಡ್ಲಿಕೊಪ್ಪ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜಗೋಪಾಲ ಡಿ.ಕಡ್ಲಿಕೊಪ್ಪ-ಲಕ್ಷ್ಮೀ ಕಡ್ಲಿಕೊಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು.
Advertisement
ಬಾಗಲಕೋಟಿಯ ಮಳೆ ರಾಜೇಂದ್ರ ಮುರನಾಳ ಕ್ಷೇತ್ರ ಮಠದ ಶ್ರೀ ಮಳೆರಾಜೇಂದ್ರಸ್ವಾಮಿ ಮಹಾಪುರುಷ ಸ್ವಾಮೀಜಿ ಹಾಗೂ ಯಾದಗಿರಿಯ ಶಹಪುರದ ಶ್ರೀವಿಶ್ವಕರ್ಮ ಏಕದಂಡಗಿಮಠದ ಶ್ರೀಕಾಳಹಸ್ತೇಂದ್ರ ಮಹಾಸ್ವಾಮೀಜಿ, ಪ್ರಾ. ಅಶೋಕ ಟ.ಅಕ್ಕಿ, ಡಾ. ಕೆ.ಪಿ. ಈರಣ್ಣ, ಡಾ. ಜಿ.ಬಿ. ಪಾಟೀಲ, ಪ್ರೊ. ಸಿದ್ದು ಯಾಪಲಪರವಿ, ಪ್ರಾ. ಉಮೇಶ ಪುರದ, ಡಾ. ಎಸ್.ಡಿ. ಯರಗೇರಿ, ಮೌನೇಶ ಸಿ.ಬಡಿಗೇರ(ನರೇಗಲ್ಲ), ವಿಶ್ವನಾಥ ಕಮ್ಮಾರ, ವಿಜಯ ಕಿರೇಸೂರ ಸೇರಿದಂತೆ ಕಡ್ಲಿಕೊಪ್ಪ ಕುಟುಂಬದ ಸದಸ್ಯರು ವೇದಿಕೆಯಲ್ಲಿದ್ದರು.