ವಿಜಯಸಾಕ್ಷಿ ಸುದ್ದಿ, ಗದಗ: ಸಾರಿಗೆ ದರ ಹೆಚ್ಚಿಸಿದ ಆದೇಶವನ್ನು ಮರಳಿ ಪಡೆಯುವಂತೆ ಆಗ್ರಹಿಸಿ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಜೆಡಿಎಸ್ ಪಕ್ಷದ ಗದಗ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ಇವರ ನೇತೃತ್ವದಲ್ಲಿ ಮನವಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ, ರಾಜ್ಯ ಕಾರ್ಯದರ್ಶಿ ಈರಣ್ಣ ಬಾಳಿಕಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ, ತಾಲೂಕುಗಳ ಅಧ್ಯಕ್ಷರಾದ ಬಸವರಾಜ ಅಪ್ಪಣ್ಣವರ, ಮಂಜುನಾಥ ದೊಡ್ಮನಿ, ಸಂಗಪ್ಪ ಎಲಬುಣಿಸಿ, ಶಹರ ಘಟಕ ಅಧ್ಯಕ್ಷ ಪ್ರಫುಲ್ ಪುನೇಕರ, ಜಿಲ್ಲಾ ಪದಾಧಿಕಾರಿ ಗಿರೀಶ್ ಸಂಶಿ, ಕೆ.ಎಫ್. ದೊಡ್ಮನಿ, ಜೋಸೆಫ್ ಉದೋಜಿ, ಶಿರಾಜ ಕದಡಿ, ಜಿ.ಕೆ. ಕೊಳ್ಳಿಮಠ, ಲಲಿತಾ, ಶರಣಪ್ಪ ಹೂಗಾರ, ರಾಜೇಸಾಬ ತಹಸೀಲ್ದಾರ, ಎಂ.ಎಸ್. ಪವರ್ತಗೌಡ, ಅಬ್ದುಲ್ ನರಸಾಪುರ, ರಫೀಕ, ರಕ್ಷಿತಗೌಡ ಮುಂತಾದವರಿದ್ದರು.