ರಸ್ತೆ ಸರಿಪಡಿಸಲು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮನವಿ

0
Request of KSRTC staff to repair the road
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕರು, ಸಂಘಟನೆಯವರು ಹೋರಾಟ ನಡೆಸಿ ಮನವಿ ಸಲ್ಲಿಸಿದ್ದಾಗಿದೆ. ಇದೀಗ, ಹಾಳಾದ ರಸ್ತೆಯಲ್ಲಿ ವಾಹನ ಚಲಾಯಿಸುವ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು, ಸಿಬ್ಬಂದಿ, ಚಾಲಕ-ನಿರ್ವಾಹಕರೂ ಸಹ ರಸ್ತೆ ದುರಸ್ಥಿಗಾಗಿ ತಮ್ಮ ಮನವಿಯನ್ನು ಬುಧವಾರ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸಲ್ಲಿಸಿದರು.

Advertisement

ಮನವಿಯಲ್ಲಿ ಲಕ್ಷ್ಮೇಶ್ವರ ಘಟಕದ ವ್ಯಾಪ್ತಿಗೆ ಬರುವ ಬಹುತೇಕ ರಸ್ತೆಯಲ್ಲಿ ದೊಡ್ಡ ಪ್ರಮಾಣದ ತಗ್ಗು ಗುಂಡಿಗಳುಂಟಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ನಿತ್ಯ ವಾಹನ ಚಲಾಯಿಸುವುದು ಹರಸಾಹಸವೇ ಆಗಿದೆ. ಚಾಲಕರು ಅನಾರೋಗ್ಯಕ್ಕೊಳಗಾಗುತ್ತಿದ್ದು ಪ್ರಯಾಣಿಕರೂ ಸಮಸ್ಯೆಗೊಳಗಾಗುತ್ತಿದ್ದಾರೆ.

ಬಸ್ಸುಗಳು ರಸ್ತೆ ಮಾರ್ಗದಲ್ಲಿಯೇ ಕೆಟ್ಟು ನಿಲ್ಲುವಂತಾಗಿವೆ. ಸರಿಯಾದ ಸಮಯಕ್ಕೆ ಮಾರ್ಗ ತಲುಪಲಾಗುತ್ತಿಲ್ಲ ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆಗಳನ್ನು ವಾರದೊಳಗಾಗಿ ದುರಸ್ಥಿಗೊಳಿಸುವಂತೆ ಮನವಿ ಸಲ್ಲಿಸಿದರು.

ಶಾಸಕ ಡಾ, ಚಂದ್ರು ಲಮಾಣಿ ಮನವಿ ಸ್ವೀಕರಿಸಿ, ರಸ್ತೆಗಳ ಸ್ಥಿತಿ-ಗತಿಗಳ ಬಗ್ಗೆ ತಮಗೆ ಸಂಪೂರ್ಣ ಅರಿವಿದೆ. ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಗಳ ಸುಧಾರಣೆಗೆ ಅನೇಕ ಬಾರಿ ಸರಕಾರದ ಗಮನ ಸೆಳೆದಿದ್ದೇನೆ. ಸರಕಾರಿಂದ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗುತ್ತಿಲ್ಲ. ಗುಂಡಿ ಮುಚ್ಚಲಾದರೂ ಅನುದಾನ ಕಲ್ಪಿಸಲು ಕೋರಿದ್ದೇನೆ. ಯಾವುದೇ ಕಾರಣಕ್ಕೂ ಮಾರ್ಗದ ಬಸ್ಸುಗಳನ್ನು ನಿಲ್ಲಿಸದಂತೆ ಸೂಚಿಸಿದರು.

ಈ ವೇಳೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಶೋಭಾ ಪಾಟೀಲ, ಬೊಮ್ಮನಕಟ್ಟಿ, ಡಿ.ಎಸ್. ಹಿರೇಮಠ, ಫಕ್ಕೀರಯ್ಯ ನರಗುಂದಮಠ, ಅಂಬರೀಶ ಗುಡಗುಂಟಿ, ಹನುಮಂತ ಮ್ಯಾಟಣ್ಣವರ, ರಮೇಶ ಕೆರೆಕೊಪ್ಪ, ಡಿ.ಎಚ್. ಸೊರಟೂರ, ಬಸವರಾಜ ಕಿತ್ಲಿ, ಬಸ್ ಡಿಪೋ ಘಟಕದ ಚಾಲಕರು ನಿರ್ವಾಹಕರು, ಸಿಬ್ಬಂದಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here