ಬಡಜನರಿಗೆ ಮನೆಗಳನ್ನು ವಿತರಿಸುವಂತೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನಾದ್ಯಂತ ಎಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಕ್ಕೆ ಮನೆ ಇಲ್ಲದ ಬಡಜನರಿಗೆ ಮನೆಗಳನ್ನು ವಿತರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ತಾಲೂಕಾ ಘಟಕದ ವತಿಯಿಂದ ಗದಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

Advertisement

ಮನವಿ ಸಲ್ಲಿಸಿ ಘಟಕದ ಅಧ್ಯಕ್ಷ ಮುತ್ತಣ್ಣ ಚವಡಣ್ಣವರ ಮಾತನಾಡಿ, ಗದಗ ತಾಲೂಕಿನಾದ್ಯಂತ ಎಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಕ್ಕೆ ಮನೆ ಇಲ್ಲದ ಬಡಜನರಿಗೆ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಯೋಗ್ಯ ಬಡಜನರಿಗೆ ವಿತರಣೆ ಮಾಡಿ ಹಕ್ಕುಪತ್ರ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಈ ಬಡಜನರು ಗುಡಿಸಲುಗಳಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತ ವಾಸಿಸುತ್ತಿದ್ದಾರೆ. ಕಾರಣ, ಆದಷ್ಟು ಬೇಗ ಅರ್ಹ ಬಡಜನರಿಗೆ ಮನೆಗಳನ್ನು ಮಾರ್ಚ್ ತಿಂಗಳ ಒಳಗಾಗಿ ವಿತರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಮಾಲಿಪಾಟೀಲ, ಜಿಲ್ಲಾ ಉಪಾಧ್ಯಕ್ಷರುಗಳಾದ ಮಾರುತಿ ಈಳಗೇರ, ಹನಮಂತ ಪೂಜಾರ, ತಾಲೂಕಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಭೋವಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ತೌಸಿಫ ಢಾಲಾಯತ, ಚಾಲಕ ಘಟಕದ ಅಧ್ಯಕ್ಷ ಗೌಸುಸಾಬ ಶಿರಹಟ್ಟಿ, ತಾಲೂಕಾ ಉಪಾಧ್ಯಕ್ಷ ಈರಣ್ಣ ಹುರಕಡ್ಲಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಇಸಾಕ್ ನದಾಫ್, ತಾಲೂಕಾ ಪ್ರ. ಸಂಚಾಲಕರಾದ ಸಲೀಂ ಬೋದ್ಲೆಖಾನ, ಮಹಾಂತೇಶ ನಡಗೇರಿ, ನಾಗಪ್ಪ ಅಣ್ಣಿಗೇರಿ, ರಮೇಶ ಅಬ್ಬಿಗೇರಿ, ಜಿಲಾನಿ ಗುಳಗುಂದಿ, ದ್ಯಾಮಣ್ಣ ಈಳಗೇರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here