ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಂಗನವಾಡಿ ಕಾರ್ಯಕರ್ತೆಯರು ತಮ್ಮನ್ನು ಬಿಎಲ್ಓ ಕೆಲಸದಿಂದ ಬಿಡುಗಡೆಗೊಳಿಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎ.ಎನ್. ನಾಯಕ, ಉಪಾಧ್ಯಕ್ಷೆ ವ್ಹಿ.ಬಿ. ಗದಗ, ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓ ಕೆಲಸದಿಂದ ಬಿಡುಗಡೆ ಮಾಡಲು ಹಲವಾರು ಬಾರಿ ವಿನಂತಿಸಿದ್ದರೂ ಕ್ರಮವಹಿಸಿಲ್ಲ. ನಮ್ಮ ಇಲಾಖೆಯ ಹೆಚ್ಚಿನ ಕೆಲಸಗಳನ್ನು ಮೊಬೈಲ್ ಮೂಲಕವೇ ಮಾಡುತ್ತಿರುವದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಮ್ಮನ್ನು ಬಿಎಲ್ಓ ಕೆಲಸದಿಂದ ಬಿಡುಗಡೆ ಮಾಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ. ಕಿತ್ತೂರ, ಎಂ.ಎ. ಕಾಂಬಳೆ, ಎಂ.ಎಸ್. ಕಾಳಿ, ಆರ್.ಬಿ. ಮಣ್ಣೂರ, ಎಸ್.ಬಿ. ಬಣಗಾರ, ಎಸ್.ಬಿ. ಪಲ್ಲೇದ, ಎಸ್.ಎಸ್. ಮಣ್ಣೂರ, ಆರ್.ಎಸ್. ವಡವಿ, ಜಿ.ಡಿ. ಪತ್ರದ, ಕೆ.ಎನ್. ಬಡಿಗೇರ, ಎಸ್.ಎಫ್. ಮೊರಬದ, ಎಂ.ಎಚ್. ಹರಿಜನ, ಪಿ.ಎಂ. ಹೊಸಮನಿ, ಜಯಲಕ್ಷ್ಮೀ ಥೋರಾತ, ವಿನೋದಾ ಭಾವನೂರ, ಸುಧಾ ಹೇಮಗಿರಿಮಠ, ಎಂ.ಆರ್. ವಾರದ, ಸ್ನೇಹಾ ಅಂದಾನಪ್ಪನವರ, ಜೆ.ಸಿ. ತೋಟದ, ಜಿ.ಪಿ. ಕೆಂಪಣ್ಣನವರ, ಡಿ.ಕೆ. ಸನದಿ, ಎಸ್.ಎಸ್. ಚಿಲಕವಾಡ ಮುಂತಾದವರು ಉಪಸ್ಥಿತರಿದ್ದರು.