ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ 1988-1989ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ಪೌರ್ಣಿಮೆ ಅಂಗವಾಗಿ ಗುರುಗಳಿಗೆ ಗೌರವ ಸಮರ್ಪಣೆ, ಸನ್ಮಾನ ಕಾರ್ಯಕ್ರಮ ಜರುಗಿತು.
Advertisement
ಗುರುಗಳಾದ ಎಸ್.ಬಿ. ಇನಾಮತಿ, ಜಿ.ಪಿ. ದೇಶಪಾಂಡೆ, ಡಿ.ಎಂ. ಬಂಡಿ, ಆರ್.ಎಚ್. ಬಂಡಿ, ಕೆ.ಎಸ್. ಪಾಟೀಲ, ಪಿ.ವ್ಹಿ. ಶೇಷಗಿರಿ ಎ.ಎಂ. ಬದಾಮಿ ಇವರುಗಳ ಮನೆಗೆ ತೆರಳಿ ಸನ್ಮಾನಿಸಿದರೆ, ಕೆ.ಎನ್. ಪಾಪಳೆ ಅವರನ್ನು ನಿವೃತ್ತಿಯ ನಿಮಿತ್ತ ಸನ್ಮಾನಿಸಲಾಯಿತು.
ಈ ಸಂರ್ಭದಲ್ಲಿ ಶೈನಾಜ್ ಅಣ್ಣಿಗೇರಿ, ಮಧು ಜನಗೌಡ್ರ, ಮಹಾದೇವಿ ಚಳ್ಳಣ್ಣವರ, ಶೋಭಾ ಹಿಡ್ಕಿಮಠ, ಬಸವರಾಜ ಹೂಗಾರ, ಚನ್ನು ನಾಗಾವಿ, ಗೊಣೆಪ್ಪ ಉಮ್ಮಣ್ಣವರ, ಜೆ.ಡಿ. ಕುಕನೂರ, ಸಿದ್ದು ಹುಬ್ಬಳ್ಳಿ, ಶ್ರೀನಿವಾಸ ವಲ್ಲೂರು, ಉಮೇಶ ಸಜ್ಜನ, ಶ್ರೀಧರ್ ಅಧೋನಿ, ಮಹಮ್ಮದ್ ರಫೀಕ ಕಾಗದಗಾರ ಮುಂತಾದವರು ಉಪಸ್ಥಿತರಿದ್ದರು.