ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಗೌರವ ಉಳಿಯುತ್ತದೆ: ಹೆಚ್ ವಿಶ್ವನಾಥ್

0
Spread the love

ಮೈಸೂರು: ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಕುರಿತು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಪ್ರತಿಕ್ರಿಯೇ ನೀಡಿದ್ದಾರೆ. ಮುಖ್ಯಮಂತ್ರಿಗಳು ಯಾವಾಗಲು ಹೇಳುತ್ತಾರೆ. ಕಾನೂನು ತನ್ನ ಪಾಡಿಗೆ ಕೆಲಸ ಮಾಡುತ್ತದೆ ಎಂದು. ಅದೇ ರೀತಿ ಈಗ ಕೆಲಸ ಮಾಡಿದೆ. ಮೊದಲೇ ನಾನು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೆ. ದಯವಿಟ್ಟು ಸೈಟ್‌ ವಾಪಸ್‌ ಕೊಡಿ. 14 ಸೈಟ್‌ ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

Advertisement

ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂಬ ಹೇಳಿಕೆ ಮಾಮೂಲಿ. ಎಲ್ಲಾ ಪಕ್ಷದವರು ಇದನ್ನೇ ಹೇಳುತ್ತಾರೆ. ಆದರೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಯಾವಾಗಲೂ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಗೌರವ ಉಳಿಯುತ್ತದೆ. ಅದನ್ನು ಬಿಟ್ಟು ಹಠ ಮಾಡಬಾರದು. ಇಲ್ಲಿಯ ಕಾನೂನು ಹಾಗೂ ಜನರಿಗೆ ತಲೆಬಾಗಿ ತನಿಖೆ ಎದುರಿಸಬೇಕು ಎಂದು ಹೆಚ್​ ವಿಶ್ವನಾಥ್ ಹೇಳಿದರು.

 


Spread the love

LEAVE A REPLY

Please enter your comment!
Please enter your name here