ಬೆಂಗಳೂರು: ಸಿಲಿಕಾನ್ ಸಿಟಿಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಈ ಮೊದಲು ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳು ಇದ್ದರೂ ಈ ಮಟ್ಟದಲ್ಲಿ ಜನರು ಓಡಾಡಿರಲಿಲ್ಲ. ಆದರೆ ಆರ್ಸಿಬಿ ಟ್ರೋಫಿ ಗೆದ್ದು ಚಿನ್ನಸ್ವಾಮಿ ಮೈದಾನಕ್ಕೆ ಬರುತ್ತೋ ಎಂದು ಗೊತ್ತಾಯಿತೋ ಅವಾಗ 9 ಲಕ್ಷ ಕ್ಕೂ ಅಧಿಕ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
- ಒಟ್ಟು 9,66,732 ಮಂದಿ ಪ್ರಯಾಣಿಕರ ಓಡಾಟ
- ಲೈನ್ 1ರಲ್ಲಿ 4,78,334 ಪ್ರಯಾಣಿಕರ ಸಂಚಾರ
- ಲೈನ್ 2ರಲ್ಲಿ 2,84,674 ಪ್ರಯಾಣಿಕರ ಸಂಚಾರ
- ಮೆಜೆಸ್ಟಿಕ್ ಇಂಟರ್ ಚೇಂಜ್ನಲ್ಲಿ 2,03,724 ಪ್ರಯಾಣಿಕರು ಓಡಾಟ ನಡೆಸಿದ್ದಾರೆ.
ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಆರ್ಸಿಬಿ ಅಭಿಮಾನಿಗಳಂತ ಖುಷಿ ಹೇಳ ತೀರದು. ಇದರ ಜೊತೆ ಟ್ರೋಫಿ ಗೆದ್ದ ಆರ್ಸಿಬಿ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬರುತ್ತಾರೆ ಎನ್ನುವ ಸುದ್ದಿ ಯಾವಾಗ ಹೊರ ಬಿತ್ತೋ ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಖುಷಿಯಲ್ಲಿ ಸಂಭ್ರಮದ ನಡುವೆ ಆಘಾತ, ಆಕ್ರಂದನ ಎಲ್ಲವೂ ನಡೆದು ಹೋಗಿದೆ.