`ರಿಕ್ಷಾ ಚಾಲಕ’ ಈ ವಾರ ತೆರೆಗೆ

0
Spread the love

ಆಯುಷ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರಾವತಿ ಶಶಿಕುಮಾರ್ ನಿರ್ಮಿಸಿರುವ ಚಿತ್ರ `ರಿಕ್ಷಾ ಚಾಲಕ’ ಈ ವಾರ ತೆರೆ ಕಾಣುತ್ತಿದೆ. ಆಯುಷ್ ಶಶಿಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವು ಕೊರೋನಾ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಆದಾಗ ಆಟೋ ಡ್ರೈವರ್‌ಗಳು ಎದುರಿಸಿದ ಸಂಕಷ್ಟಗಳು, ಅನುಭವಿಸಿದ ನೋವುಗಳನ್ನು ಕಣ್ಣಾರೆ ಕಂಡಿದ್ದು, ಅದೇ ಕಥೆಯನ್ನು ಈಗ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ.

Advertisement

ಒಬ್ಬ ಒಳ್ಳೆಯ ಆಟೋ ಡ್ರೈವರ್ ಸಮಾಜದಲ್ಲಿ ಸಾಕಷ್ಟು ಕಷ್ಟ ಎದುರಿಸುತ್ತಾನೆ. ಆಟೋ ಡ್ರೈವರ್‌ಗಿರುವ ಕಷ್ಟವೇನು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು, ಚಿತ್ರ ಮಂದಿರಕ್ಕೆ ಬಂದು ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕೆಂದು ನಿರ್ಮಾಪಕರಾದ ಶರಾವತಿ ಶಶಿಕುಮಾರ ಮತ್ತು ನಾಯಕ ನಟ ಚಿರಂತ್ ಕೋರಿದ್ದಾರೆ.

ಮೈಸೂರು, ವರುಣ, ಕೆ.ಆರ್. ನಗರ, ಸಾಲಿಗ್ರಾಮ ಹಾಗೂ ಮುರ್ಡೇಶ್ವರದ ಸುತ್ತಮುತ್ತ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದ ನಾಯಕ ಚಿರಂತ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ನಂದಿನಿ ನಾಯಕಿಯಾಗಿ ನಟಿಸಿದ್ದರೆ, ಬಾಲರಾಜ್ ವಾಡಿ, ಮಿಮಿಕ್ರಿ ಗೋಪಿ, ಹರಣಿ, ಚಂದ್ರಪ್ರಭ, ರಜಿನಿ, ಮುನಿಸ್ವಾಮಿ, ನವೀನ್ ಕುಮಾರ್, ದರ್ಶನ್, ವಿನೋದ್ ಗೊಬ್ರಗಾಲ ಮುಂತಾದವರು ತಾರಾಗಣದಲ್ಲಿದ್ದಾರೆ.

ಸಹ ನಿರ್ಮಾಪಕರಾಗಿ ಧರ್ಮ ಚಾರಿ, ಸಂಗೀತ ವೇದಾಂತ್ ಅತಿಶಯ್ ಜೈನ್, ಸಂಕಲನ ವಂಶಿ, ಶಶಿ ಆರಕ್ಷಕ ಅವರ ನೃತ್ಯ-ಕಥೆ-ಸಾಹಿತ್ಯ ಸಂಭಾಷಣೆ ಈ ಚಿತ್ರಕ್ಕಿದೆ. ಛಾಯಗ್ರಹಣ ಆನಂದ್, ಪತ್ರಿಕಾ ಸಂಪರ್ಕ ಕಲ್ಲೇಶ, ವಿ.ಎಂ.ಎಸ್. ಗೋಪಿ, ಸಾಹಸ ರಾಮದೇವ್, ಕಲೆ ದೇವು, ಆಯುಷ್ ಶಶಿಕುಮಾರ್ ನಿರ್ದೇಶನ ಚಿತ್ರಕ್ಕಿದೆ.

– ವಿ.ಎಂ.ಎಸ್. ಗೋಪಿ.

ಬೆಂಗಳೂರು.


Spread the love

LEAVE A REPLY

Please enter your comment!
Please enter your name here