ರಸ್ತೆ ಅಪಘಾತ: ಸೆಲ್ಪ್ ಆಕ್ಸಿಡೆಂಟ್ ಗೆ ಬೈಕ್ ನಲ್ಲಿ ಬರ್ತಿದ್ದ ಸಹೋದರರು ಬಲಿ!

0
Spread the love

ಬೆಂಗಳೂರು:- ಆನೇಪಾಳ್ಯ ಬಸ್ ನಿಲ್ದಾಣದ ಎದುರು ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರರು ಸಾವಿಗೀಡಾದ ಘಟನೆ ಜರುಗಿದೆ.

Advertisement

ಶೇಖ್ ಅಸ್ಲಾಂ ಬಷೀರ್(24), ಶೇಖ್ ಸಕೀಲ್ ಬಷೀರ್(23) ಮೃತರು. ಇವರು ನೀಲಸಂದ್ರ ನಿವಾಸಿಗಳಾಗಿದ್ದಾರೆ. ರಸ್ತೆ ಬದಿ ಇದ್ದ ಪೋಲ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಅಶೋಕ್‌ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.


Spread the love

LEAVE A REPLY

Please enter your comment!
Please enter your name here