ರಸ್ತೆ ಅಪಘಾತ: ಮೃತರ ಕುಟುಂಬಕ್ಕೆ ಪರಿಹಾರ ಪಾವತಿಗೆ ವಿಳಂಬ: KSRTC ಬಸ್ ಜಪ್ತಿ!

0
Spread the love

ಕುಷ್ಟಗಿ: ಕಳೆದ 10 ವರ್ಷಗಳ ಹಿಂದೆ ಗದಗ ಜಿಲ್ಲೆಯ ಗಜೇಂದ್ರಗಡ ಘಟಕದ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದರು. 2015 ರಲ್ಲಿ ನಡೆದ ಘಟನೆ ಇದಾಗಿದ್ದು, ಇಷ್ಟು ವರ್ಷಗಳಾದರೂ ಮೃತರ ಕುಟುಂಬಸ್ಥರಿಗೆ ಇದುವರೆಗೂ ಪರಿಹಾರ ಪಾವತಿ ಆಗಿಲ್ಲ. ಹೀಗಾಗಿ ಸ್ಥಳೀಯ ಹಿರಿಯ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯವು ಗದಗ ಸಾರಿಗೆ ವಿಭಾಗದ ಗಜೇಂದ್ರ ಗಡ ಘಟಕದ ಬಸ್‌ ಅನ್ನು ಬುಧವಾರ ವಶಕ್ಕೆ ಪಡೆದಿದೆ.

Advertisement

ಸಿದ್ದಪ್ಪ ಅಂಗಡಿ ಮೃತ ವ್ಯಕ್ತಿ. ಈತ ಹುನಗುಂದ ತಾಲೂಕಿನ ಕೆನಗಲ್ಲ ಗ್ರಾಮದ ನಿವಾಸಿ. ಇವರು 2015 ರಲ್ಲಿ ಗ್ರಾಮದ ಇಳಕಲ್‌ ರಸ್ತೆಯಲ್ಲಿ ತೆರಳುತ್ತಿದ್ದಾಗ ಗಜೇಂದ್ರಗಡ ಘಟಕದ ಬಸ್‌ ಡಿಕ್ಕಿ ಹೊಡೆದು, ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಇಲಕಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕುಷ್ಟಗಿ ಸ್ಥಳೀಯ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸ್ಥಳಿಯ ನ್ಯಾಯಾಲಯವು 6.96 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿತ್ತು. ಆದರೆ ಘಟನೆ ನಡೆದು 10 ವರ್ಷಗಳೇ ಉರುಳಿದರೂ ಇನ್ನೂ ಮೃತರ ಕುಟುಂಬಸ್ಥರಿಗೆ ಪರಿಹಾರ ವಿತರಿಸಿಲ್ಲ. ಹೀಗಾಗಿ ಪರಿಹಾರ ನೀಡಲು ವಿಳಂಬ ಧೋರಣೆ ತೋರಿದ ಹಿನ್ನೆಲೆ ಗಜೇಂದ್ರಗಡ ಘಟಕದ ಬಸ್‌ ಡಿಪೋ ವಿರುದ್ಧ ನ್ಯಾಯಾಲಯ ತೀವ್ರ ಅಸಮಾಧಾನ ಹೊರ ಹಾಕಿದೆ. ಅಲ್ಲದೇ ಕೂಡಲೇ ಬಸ್ ಅನ್ನು ಜಪ್ತಿ ಮಾಡಲು ಆದೇಶಿಸಿದೆ.

ಹೈಕೋರ್ಟ್ ಮೇಲ್ಮನವಿ:

ಸದರಿ ಆದೇಶವನ್ನು ಪ್ರಶ್ನಿಸಿ ಮೃತನ ವಾರಸುದಾರರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸ್ಥಳೀಯ ನ್ಯಾಯಾಲಯ ನೀಡಿದ್ದ ಪರಿಹಾರದ ಹಣವನ್ನು 6.98 ಲಕ್ಷದ ಹಣವನ್ನು ಹೈಕೋರ್ಟ್ 13.60 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತ್ತು. ಪರಿಹಾರ ಹಣವನ್ನು ಭರಿಸಲು ವಿಳಂಬ ಮಾಡಿದ ಬಸ್ ಡಿಪೋಗೆ ಬಡ್ಡಿ 6.34 ಲಕ್ಷ ಒಳಗೊಂಡು 19.99 ಲಕ್ಷ ರೂ ಪರಿಹಾರ ಕೊಡುವಂತೆ ನ್ಯಾಯಾಲಯ ಆದೇಶಿಸಿದೆ.


Spread the love

LEAVE A REPLY

Please enter your comment!
Please enter your name here