ನೆಲಮಂಗಲ:– ಗಂಡನ ಎದುರಲ್ಲೇ ತುಂಬು ಗರ್ಭಿಣಿ ಹೆಂಡತಿ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದಲ್ಲಿ ಜರುಗಿದೆ.
Advertisement
ಸೀಮಂತಕ್ಕೆ ಹೊರಟಿದ್ದ ಸಿಂಚನ ಮಗುವಿನೊಂದಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದ ಮಂಜುನಾಥ್ ದಂಪತಿ ದೇವಸ್ಥಾನದ ಪೂಜೆ ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.
ಪತಿ ಮಂಜುನಾಥ್ ಕಣ್ಣೇದುರೆ ಪತ್ನಿ ಸಿಂಚನ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸ್ಕೂಟರ್ ನಲ್ಲಿ ತೆರಳುವಾಗ ಹಿಂದೆಗಡೆಯಿಂದ ಬಂದ ಜಲ್ಲಿ ತುಂಬಿದ ಲಾರಿ ಗುದ್ದಿದ ರಭಸಕ್ಕೆ ಸಿಂಚನ ಏಳು ತಿಂಗಳ ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪತ್ನಿಯ ಸಾವು ಕಂಡು ಪತಿಯ ಗೋಳಾಟ ಮುಗಿಲು ಮುಟ್ಟಿದೆ. ಗಂಡನ ಕಣ್ಣೆದುರೆ ತುಂಬು ಗರ್ಭಿಣಿಸಾವನ್ನಪ್ಪಿದ್ದು, ಗಂಡ ನರಳಾಟ ಅನುಭವಿಸಿದ ದೃಶ್ಯ ಮನಕಲಕುವಂತಿದೆ.