ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬುಧವಾರ ಆಟೋರಿಕ್ಷಾಗಳ ಮೇಲೆ `ಪ್ರಯಾಣಿಕರ ಸುರಕ್ಷೆ ನಮ್ಮ ಆದ್ಯತೆ’ ಎಂಬ ಘೋಷ ವಾಕ್ಯವುಳ್ಳ ಸ್ಟಿಕರ್ಗಳನ್ನು ಅಂಟಿಸಲಾಯಿತು.
Advertisement
ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಎಂ.ಪಿ. ಓಂಕಾರೇಶ್ವರಿ, ಆಟೋರಿಕ್ಷಾ ಮಾಲೀಕರು ಹಾಗೂ ಚಾಲಕರು ರಸ್ತೆ ಸುರಕ್ಷತೆಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಅಂಶಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ. ದಾಮೋದರ, ಹಿರಿಯ ಮೋಟಾರು ವಾಹನ ನಿರೀಕ್ಷರಾದ ಎಸ್.ಡಿ. ಬೆಲ್ಲದ್, ಅಧೀಕ್ಷಕರಾದ ಕೆ.ಎಂ. ಗೀತಾ, ಪ್ರಥಮ ದರ್ಜೆ ಸಹಾಯಕರಾದ ವೀರಯ್ಯ ಕಂಬಿ ಉಪಸ್ಥಿತರಿದ್ದರು.