ರೋಲ್ ಕಾಲ್ ಗಿರಾಕಿಗಳು ಎಂಜಲು ಕಾಸಿಗೆ ನಿಂತಿವೆ: ಹೋರಾಟಗಾರರ ವಿರುದ್ಧ ನಾಲಿಗೆ ಹರಿಬಿಟ್ಟ ಮದ್ದೂರು ಶಾಸಕ!

0
Spread the love

ಮಂಡ್ಯ:- ಕೆಲ ರೋಲ್ ಕಾಲ್ ಗಿರಾಕಿಗಳು ಎಂಜಲು ಕಾಸಿಗೆ ನಿಂತಿವೆ ಎಂದು ಹೋರಾಟಗಾರರ ವಿರುದ್ಧ ಮದ್ದೂರು ಶಾಸಕ ಕದಲೂರು ಉದಯ್ ನಾಲಿಗೆ ಹರಿಬಿಟ್ಟಿದ್ದಾರೆ.

Advertisement

ಮದ್ದೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಕೆಗೆ ವಿರೋಧ ವ್ಯಕ್ತಪಡಿಸಿ ರೈತರು ಸೇರಿ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಈ ಪ್ರತಿಭಟನೆ ಖಂಡಿಸುವ ಭರದಲ್ಲಿ ಹೋರಾಟಗಾರರನ್ನು ರೋಲ್ ಕಾಲ್ ಗಿರಾಕಿಗಳೆಂದು ಕರೆದು ಶಾಸಕ ಕದಲೂರು ಉದಯ್ ಇದೀಗ ಪೇಚಿಗೆ ಸಿಲುಕಿದ್ದಾರೆ.

ಶಾಸಕ ಕದಲೂರು ಉದಯ್ ಹೇಳಿದ್ದೇನು?

ಅಭಿವೃದ್ಧಿಗೆ ವಿರೋಧಿಸುವವರ ಬಗ್ಗೆ ಏನ್ ಹೇಳೋಕಾಗುತ್ತೆ, ಸಹಿಸಲಾರದವರು ವಿರೋಧ ಮಾಡ್ತಾರೆ. ಎಂಜಲು‌ ಕಾಸು ಕೊಟ್ಟು ಛೂ ಬಿಟ್ಟು ಇಂತಹ ಕೆಲಸ ಮಾಡಿಸ್ತಾರೆ. ಕೆಲ ರೋಲ್ ಕಾಲ್ ಗಿರಾಕಿಗಳಿದ್ದಾರೆ. ಸಂಘ ಸಂಸ್ಥೆ ಕಟ್ಟಿಕೊಂಡು ಎಂಜಲು ಕಾಸಿಗೆ ನಿಂತಿವೆ. ಯಾರೋ ಕೊಟ್ಟ ಪ್ರಸಾದ ಈಸ್ಕೋಂಡು ಈ ತರ ಮಾಡ್ತಿದ್ದಾರೆ.
ಯಾರಾದ್ರು ಅಭಿವೃದ್ಧಿ ಕೆಲಸ ಬೇಡ ಅಂತಾರಾ ಎಂದು ಹೋರಾಟಗಾರರ ವಿರುದ್ದ ಶಾಸಕರು ಕಿಡಿಕಾರಿದ್ದರು.

ಶಾಸಕನ ಈ ವಿವಾದಾತ್ಮಕ ಹೇಳಿಕೆಗೆ ಹೋರಾಟಗಾರರು ಮತ್ತು ರೈತ ಸಂಘಟನೆಗಳು ತಿರುಗಿ ಬಿದ್ದಿದೆ.


Spread the love

LEAVE A REPLY

Please enter your comment!
Please enter your name here