ಕಡಬಗೆರೆಯಲ್ಲಿ ಗರಿಗೆದರಿದ ರೌಡಿಸಂ: ಏರಿಯಾದಲ್ಲಿ ಮಾರಾಕಾಸ್ತ್ರ ಹಿಡಿದು ರೌಡಿಯ ಪುಂಡಾಟ!

0
Spread the love

ನೆಲಮಂಗಲ:- ಇಲ್ಲಿನ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಕಡಬಗೆರೆಯಲ್ಲಿ ಮತ್ತೆ ರೌಡಿಸಂ ಗರಿಗೆದರಿದೆ. ಇಲ್ಲಿ ರಾತ್ರಿಯಾದ್ರೆ ಜನ ಓಡಾಡೋಕು ಭಯಪಡ್ತಿದ್ದಾರೆ. ರೌಡಿ ಶೀಟರ್ ಒಬ್ಬ ಏರಿಯಾದಲ್ಲಿ ಮಾರಾಕಾಸ್ತ್ರ ಹಿಡಿದು ಪುಂಡಾಟ ತೋರಿದ್ದಾನೆ. ಎಸ್, ಕೈಯಲ್ಲಿ ಡ್ರಾಗರ್ ಹಿಡಿದು ಬೆದರಿಸಿ ನಂತರ ಕಾರ್ ಬಳಿ ನಿಂತಿದ್ದ ಯುವಕರ ಮೇಲೆ ಅಟ್ಯಾಕ್ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

Advertisement

ಮಾದನಾಯಕನಹಳ್ಳಿ ರೌಡಿಶೀಟರ್ ಮಂಜುನಾಥ್ ಹಾಗೂ ಶ್ರೇಯಸ್ ಎಂಬಾತನಿಂದ ಈ ಹಲ್ಲೆಯಾಗಿದೆ. ಕಡಬಗೆರೆ ಕ್ರಾಸ್ ನ ಶ್ರೀರಂಗ ಬಾರ್ ಬಳಿ ನಿಂತಿದ್ದ ಯುವಕರ ಮೇಲೆ ಆಕ್ಟಿವಾ ಸ್ಕೂಟರ್ ನಲ್ಲಿ ಬಂದು ರೌಡಿ‌ಶೀಟರ್ ಮಂಜುನಾಥ್ @ ಮಂಜ ಹಾಗೂ ಶ್ರೇಯಸ್ ಮನಬಂದಂತೆ ಥಳಿಸಿದ್ದಾರೆ. ಕಾರಿನ ಬಳಿ ನಿಂತಿದ್ದ ನಾಲ್ಕೈದು ಜನರ‌ ಮೇಲೆ ಹಲ್ಲೆ ನಡೆಸಿ ಬಳಿಕ ಎಸ್ಕೇಪ್ ಆಗಿದ್ದಾನೆ.

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.


Spread the love

LEAVE A REPLY

Please enter your comment!
Please enter your name here