ಕರಾಟೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ವಿದ್ಯಾರ್ಥಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗದುಗಿನ ಅಮರೇಶ್ವರ ನಗರದಲ್ಲಿರುವ ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

Advertisement

ವಿದ್ಯಾರ್ಥಿಗಳಾದ ಕಾರ್ತಿಕ ದ್ವಿತೀಯ, ಸಂಜನಾ ಸಂಗನಾಳ ದ್ವಿತೀಯ, ಮಹಮ್ಮದಹಾಜಿದ ಕಾಗದಗಾರ ದ್ವಿತೀಯ, ಶಿಫಾ ದೊಡ್ಡಮನಿ ತೃತೀಯ, ಭೂಮಿಕಾ ನಿಂಬನಾಯ್ಕರ ಪ್ರಥಮ, ಗಗನ ನಿಂಬನಾಯ್ಕರ ದ್ವಿತೀಯ, ಸಂಪ್ರೀತ ಹೂಗಾರ ಪ್ರಥಮ, ರುಕ್ಕಯ್ಯ ಬೇಪಾರಿ ಪ್ರಥಮ, ತಹನಾಜ ಬಳ್ಳಾರಿ ಪ್ರಥಮ, ಚಂದನಾ ದ್ವಿತೀಯ, ಮಹಮ್ಮದಸೋಹೇಬ್ ಮನಿಯಾರ ಪ್ರಥಮ, ಪ್ರವೀಣ ಪ್ರಥಮ, ಹನಮಂತಗೌಡ ಪಾಟೀಲ ಪ್ರಥಮ, ಮಹಮ್ಮದ ಆದಿಲ್ ಹುಬ್ಬಳ್ಳಿ ಪ್ರಥಮ, ಧರೇಂದ್ರ ರಾಯ್ಕರ ಪ್ರಥಮ, ಹರ್ಷಾ ಪ್ರಥಮ, ರುಹಿನಾಜ ತೃತೀಯ, ಸೈಫ ದೊಡ್ಡಮನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳನ್ನು ಅಸೋಸಿಯೇಶನ್‌ನ ಮುಖ್ಯ ತರಬೇತುದಾರ ಮೆಹಬೂಬ ದೊಡ್ಡಮನಿ, ರಾಯಸಾಬ ಹುಯಿಲಗೋಳ ಮತ್ತು ಪಾಲಕರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here