ಗದಗ: ಕರ್ನಾಟಕ ವಿಧಾನ ಮಂಡಲದ ಅರ್ಜಿ ಹಾಗೂ ವಸತಿ ಸಮಿತಿಯ ಸದಸ್ಯರೊಂದಿಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಕೇಂದ್ರಾಡಳಿತ ಪ್ರದೇಶವಾದ ಧಿಯುಧಮನ್ ಹಾಗೂ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಆಡಳಿತಾಧಿಕಾರಿ, ಗುಜರಾತ್ನ ಮಾಜಿ ಸಚಿವ ಪ್ರಫುಲ್ ಪಟೇಲ್ರವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಆಡಳಿತಾತ್ಮಕ ವಿಚಾರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ ಹಾಗೂ ಸದಸ್ಯರುಗಳಾದ ಡಿ.ಎಸ್. ಅರುಣ, ಸುಜಾ ಕುಶಾಲಪ್ಪ, ಬಿ.ಜಿ. ಪಾಟೀಲ, ಮಧು ಮಾದೇಗೌಡ ಉಪಸ್ಥಿತರಿದ್ದರು.
Advertisement