ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆ ಎಲ್ಲಾ ಜಿಲ್ಲೆಗಳಲ್ಲಿ ಜುಲೈ 6ರಂದು ಘೋಷಣೆಯಾಗಿದ್ದು, ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಜರುಗಲಿದೆ.
Advertisement
ಗದಗ ತಾಲೂಕಿನಿಂದ ಸಾಮಾಜಿಕ ಚಿಂತಕ ಸಂಗಮೇಶ ಹಾದಿಮನಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಯುವಕರು ಮುಂದಾಗಬೇಕಿದೆ. ಸಂಗಮೇಶ ಹಾದಿಮನಿಯವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಅಭಿವೃದ್ಧಿಯ ಬೆಳವಣಿಗೆಯ ಪೂರಕವಾಗಿದೆ ಎಂದರು.
ಗುರಪ್ಪ ತಿರ್ಲಾಪೂರ, ಅಮಿತ ಪೂಜಾರ, ಹರೀಶ ಬಾರಕೇರ, ಬಸವರಾಜ ಗುಡಿಸಾಗರ, ಮಧುಶೇಖರ ಪೂಜಾರ, ಹೇಮಂತ ದಳವಾಯಿ, ಮಂಜುನಾಥ ಗುಡಿಸಾಗರ, ಸುಜಾತ ಗುಡಿಸಾಗರ, ಸೌಮ್ಯ ಸುಣಗಾರ, ಕವಿತಾ ಗುಡಿಸಾಗರ, ರಾಜು ಪೂಜಾರ, ಶಂಕರಗೌಡ ರಾಹುತ್, ನಾಗರಾಜ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.