ಶಾಲಾ ವಾರ್ಷಿಕೋತ್ಸವದಿಂದ ಪ್ರತಿಭೆಗಳ ಅನಾವರಣ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿ ಮಗುವಿನ ಬೆಳವಣಿಗೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

Advertisement

ಡಂಬಳ ಹೋಬಳಿಯ ಬರದೂರ ಗ್ರಾಮದ ಚಟ್ಟೇರ ವಿದ್ಯಾ ವರ್ಧಕ ಸಂಘ, ಬಿಳಗಿ ಶ್ರೀ ಈಶ್ವರಪ್ಪ ಎಂ.ನಾಡಗೌಡ್ರ ಮತ್ತು ಬಾಳಪ್ಪ ನಾಡಗೌಡ್ರ ಇವರ ಸ್ಮರಣಾರ್ಥವಾಗಿ ಜ್ಞಾನಸೂರ್ತಿ ಇಂಟರ್‌ನ್ಯಾಶನಲ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 1ರಿಂದ 5ನೇ ತರಗತಿ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಸಮಾಜದಲ್ಲಿ ಒಳ್ಳೆಯವರಾಗಿ ಗುರುತಿಸಿಕೊಳ್ಳಬೇಕಾದರೆ ಒಳ್ಳೆಯ ವಿದ್ಯಾವಂತರಾಗಬೇಕು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದುಕೊಂಡು ಶಾಲೆಯ, ಊರಿನ ಹಾಗೂ ತಂದೆ-ತಾಯಿಗಳಿಗೆ ಹೆಸರು ತರಬೇಕೆಂದು ಹೇಳಿದರು.

ಶಾಲಾ ಸಮಿತಿಯ ಕಾರ್ಯದರ್ಶಿ ಮೋಹನ ಚಟ್ಟೇರ್ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ನಮ್ಮ ಜ್ಞಾನಸ್ಪೂರ್ತಿ ಇಂಟರ್‌ನ್ಯಾಶನಲ್ ಪೂರ್ವ ಪ್ರಾಥಮಿಕ ಶಾಲೆ ನಿರಂತರವಾಗಿ ಶ್ರಮಿಸುತ್ತಿದೆ. ವಿವಿಧ ಗ್ರಾಮಗಳಿಂದ ಬಂದ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಗುರು ಪಾಟೀಲ, ಬಿಗ್ ಬಾಸ್ ಹಾಗೂ ಸರಿಗಮಪ ಖ್ಯಾತಿಯ ಹನಮಂತ ಲಮಾಣಿ ಅವರ ಹಾಡುಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಗೌರಮ್ಮ ನಾಡಗೌಡ, ಸಿಪಿಐ ಮಂಜುನಾಥ ಕುಸಗಲ್, ಗಂಗಾಧರ ಅಣ್ಣಿಗೇರಿ, ಡಾ. ಪಾರ್ವತಿ ಚಟ್ಟೇರ, ವೀರನಗೌಡ ಈ ನಾಡಗೌಡ, ಮುಖ್ಯೋಪಾಧ್ಯಾಯ ಸತ್ಯಪ್ಪ ತಳವಾರ, ಎಮ್.ಜಿ. ಗಚ್ಚೆನ್ನವರ, ಎಮ್.ಎಮ್. ಹೆಬ್ಬಾಳ, ಈರಣ್ಣ ಚಟ್ಟೇರ, ಎನ್.ಎಮ್. ಕುಕನೂರ, ಹೆಚ್.ಎನ್. ಗೌಡ್ರ, ಮಾಲಿಂಗಪ್ಪ ಚಟ್ಟೇರ್, ಶಾಂತಮ್ಮ ಚಟ್ಟೇರ್, ಹನಮಪ್ಪ ನಾಡಗೌಡರ, ಸುನಿತಾ ಚಟ್ಟೇರ್, ಆನಂದ ಚಟ್ಟೇರ್, ಸೀಮಾ ಚಟ್ಟೇರ್, ಶಿವಲೀಲಾ ಕುಂಬಾರ, ತೇಜಸ್ವಿನಿ ಕುಕನೂರು, ಪ್ರಕಾಶ ಇಮ್ಮಡಿ, ಶಿವಾನಂದ ಲಮಾಣಿ, ನಿತ್ಯಾ ಮೋಹನ ಚಟ್ಟೇರ, ಎಸ್.ವಿ. ಅಡರಗಟ್ಟಿ, ಎಸ್.ವಿ. ಅರಿಶನದ, ಪೂರ್ವಿಕಾ ನಾಡಗೌಡ್ರ, ವಿಶ್ವನಾಥ ಉಳ್ಳಾಗಡ್ಡಿ, ಶಿವಾನಂದ ಲಮಾಣಿ, ಲಕ್ಷ್ಮಣ ಲಮಾಣಿ, ಶರಣಪ್ಪ ಗದಗ, ಬಸವರಾಜ ತಳವಾರ, ಗೌಸುಸಾಬ ದೋಟಿಹಾಳ, ಚನ್ನಪ್ಪ ಹೊಸಮನಿ, ಶಿವಪ್ಪ ಮೇಟಿ, ರವಿ ಮೇಟಿ ಸೇರಿದಂತೆ ಸಿಬ್ಬಂದಿ ವರ್ಗ, ಗ್ರಾಮಸ್ಥರು, ಪಾಲಕರು, ವಿದ್ಯಾರ್ಥಿಗಳು ಇದ್ದರು.

ವೇ.ಮೂ ಗುರುಮೂರ್ತಿಸ್ವಾಮಿ ಇನಾಮದಾರ, ಬಿ.ಇ.ಒ ಎಚ್.ಎಮ್. ಫಡ್ನೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ. ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು-ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಢಿಸಿಕೊಳ್ಳುವುದು ಒಳ್ಳೆಯ ಬೆಳವಣಿಯಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here