ಹುಬ್ಬಳ್ಳಿ: ನಿಖಿಲ್ ಹಂಜಗಿ ನೇತೃತ್ವದ ಜೀವ ಧ್ವನಿ ಫೌಂಡೇಶನ್ ವತಿಯಿಂದ ಹೆಗ್ಗೇರಿಯ ಶ್ರೀ ಮಂಜುನಾಥ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರು, ಜೀವ ಧ್ವನಿ ಫೌಂಡೇಶನ್ ಬಡವರಿಗೆ, ನೊಂದವರಿಗೆ ಭರವಸೆಯಾಗಿದೆ ಎಂದರು.ಇನ್ನರ್ ವೀಲ್ ಕ್ಲಬ್ ನ ಶೃತಿ ಭೂಸನೂರಮಠ ಮಾತನಾಡಿ, ಜೀವ ಧ್ವನಿ ಫೌಂಡೇಶನ್ ನ ಕಾರ್ಯಚಟುವಟಿಕೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ನ ಗುರು ಉಂಕಿ, ಪರೋಕ್ಷ ಹೂಲಿ, ವಿಜಯ್ ಮೆಹರವಾಡೆ, ಶರೀಫ್, ಕಾರ್ತಿಕ್ ಕಿಂಟಿಗೊಂಡ್, ಪುನೀತ, ಚನ್ನಪ್ಪ ಕಳೆಯವೇರ್, ರಾಘವೇಂದ್ರ ಬಳ್ಳಾರಿ, ಅವಿನಾಶ್, ಕಿರಣ್ ಕೊಪ್ಪದ್, ಶ್ರೇಯಸ್ ಚೆನ್ನಿ, ಅನಿಕೇತ್ ಅರ್ಚಕ,
ಶ್ರೀನಿವಾಸ್, ವಿನಾಯಕ್, ಉಮೇಶ್ ಬದ್ದಿ, ವಿನೋದ್, ಕಾರ್ತಿಕ್, ರೇಣುಕ, ಅಪೇಕ್ಷ, ಬೂಮಿಕಾ, ದಯಾನಂದ ಜಾನ್ವಿ, ಶಾಹೀನ್, ವೈಷ್ಣವಿ, ಶಾಲೆಯ ಕಮಿಟಿಯ ಪದಾಧಿಕಾರಿಗಳು ಹಾಗು ಹೆಗ್ಗೇರಿಯ ಗುರುಹಿರಿಯರು ಪಾಲ್ಗೊಂಡಿದ್ದರು.