ದಾಖಲೆಯಿಲ್ಲದೇ ಸಾಗಿಸುತ್ತಿದ್ದ ನಗದು ವಶ

0
checkpost
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾದ ಹುಬ್ಬಳ್ಳಿ ರಸ್ತೆಯ ರಾಮಗೇರಿ ಚೆಕ್‌ಪೋಸ್ಟ್ ನಲ್ಲಿ ಸೋಮವಾರ ಸೂಕ್ತ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 1 ಲಕ್ಷ ರೂ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ತಾಲೂಕಿನ ಶಿಗ್ಲಿ ಗ್ರಾಮದ ಮಲಿಕಜಾನ್ ಸುಂಕದ ಎಂಬ ವ್ಯಕ್ತಿ ಸೂಕ್ತ ದಾಖಲಾತಿಗಳಿಲ್ಲದೇ ಲಕ್ಷ್ಮೇಶ್ವರ -ಹುಬ್ಬಳ್ಳಿ ಮಾರ್ಗದ ಬಸ್ಸಿನಲ್ಲಿ ನಗದನ್ನು ತೆಗೆದುಕೊಂಡು ಹೋಗುತ್ತಿರುವಾಗ ವಶಪಡಿಸಿಕೊಳ್ಳಲಾಗಿದೆ.

ಈ ವೇಳೆ ತಹಸೀಲ್ದಾರ ವಾಸುದೇವ ಎಂ.ಸ್ವಾಮಿ, ಫ್ಲೈಯಿಂಗ್ ಸ್ಕ್ವಾಡ್ ಮಹೇಶ ಹಡಪದ, ಪಿಎಸ್‌ಐ ಈರಣ್ಣ ರಿತ್ತಿ, ವಿನಾಯಕ, ಬಿ.ಎಂ. ಕಾತರಾಳ ಸೇರಿ ಸಿಬ್ಬಂದಿಗಳಿದ್ದರು.

ಮನವಿ

ಸಣ್ಣ ಪುಟ್ಟ ವ್ಯಾಪಾರಸ್ಥರು, ರೈತರು ಸೇರಿ ಜನಸಾಮಾನ್ಯರು ಆಸ್ಪತ್ರೆ, ಮದುವೆ ಜವಳಿ-ಆಭರಣ ಖರೀದಿ, ಕೃಷಿ ಉಪಕರಣಗಳು, ಸಾಲ ಮರುಪಾವತಿ ಸೇರಿ ಅನೇಕ ಕಾರಣಳಿಗೆ ಹಣ ತೆಗೆದುಕೊಂಡು ಹೋಗುತ್ತಾರೆ. 50 ಸಾವಿರ ರೂ ಮೇಲ್ಪಟ್ಟ ಹಣ ತೆಗೆದುಕೊಂಡು ಹೋಗಬಾರದು ಎಂಬ ಮಾಹಿತಿ/ಅರಿವು ಅವರಿಗಿರುವುದಿಲ್ಲ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಅಡಿ ವಶಪಡಿಸಿಕೊಂಡ ಹಣವನ್ನು ಸೂಕ್ತ ದಾಖಲೆ ನೀಡಿದ ಕೂಡಲೇ ಮರುಪಾವತಿ ಮಾಡುವ ವ್ಯವಸ್ಥೆ ಸರಳೀಕರಣಗೊಳಿಸಬೇಕು ಎಂದು ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here