ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದ ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ೨೦೨೫/೨೬ನೇ ಸಾಲಿನ ಫೆಬ್ರುವರಿ ತಿಂಗಳಲ್ಲಿ ಜರಗುವ ಜಾತ್ರಾ ಮಹೋತ್ಸವದ ನೂತನ ಅಧ್ಯಕ್ಷರಾಗಿ ಕೆ.ಎಲ್. ಕರಿಗೌಡ್ರ, ಉಪಾಧ್ಯಕ್ಷರಾಗಿ ಸಿದ್ದಲಿಂಗೇಶ ಕುರ್ತಕೋಟಿ ಹಾಗೂ ಹೊನ್ನಪ್ಪ ನೀಲಗುಂದ, ಕಾರ್ಯದರ್ಶಿಯಾಗಿ ಶಿವಬಸವ ಹಸಬಿ, ಖಜಾಂಚಿಯಾಗಿ ಅಶೋಕ ಮೆಣಸಿನಕಾಯಿ ಆಯ್ಕೆಯನ್ನು ಗವಿಮಠದ ಡಾ.ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಾಲಲೀಲಾ ಸೇವಾ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಶಿವಣ್ಣಾ ನೀಲಗುಂದ, ಬಸವರಾಜ ವಾಲಿ, ಅಶೋಕ ಸೋನಗೋಜಿ, ಬಸವರಾಜ ಬಾತಾಖಾನಿ, ಡಾ. ಎಸ್.ಸಿ. ಚವಡಿ, ಬಸವರಾಜ ಸುಂಕಾಪೂರ, ಪಿ.ಎಸ್. ಮರಿದೇವರಮಠ, ಎಸ್.ಸಿ. ಬಡ್ನಿ, ಫಕ್ಕೀರಯ್ಯ ಅಮೋಘಿಮಠ, ಎಸ್.ಎಂ. ಉಜ್ಜಣ್ಣವರ, ಸಂಜಯ ನೀಲಗುಂದ, ವಿಜಯ ನೀಲಗುಂದ, ಬಸವರಾಜ ಬಡ್ನಿ ಬಾಲಲೀಲಾ ಮಾಹಾಂತ ಶಿವಯೋಗಿ ಸದ್ಭಕ್ತ ಮಂಡಳಿಯವರು ಇದ್ದರು.