ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ರೋಣ ವಿಧಾನಸಭಾ ಕ್ಷೇತ್ರದ ರೋಣ ಮಂಡಲದ ನೂತನ ಅಧ್ಯಕ್ಷರಾಗಿ ಇಟಗಿ ಗ್ರಾಮದ ಉಮೇಶ ಮಲ್ಲಾಪೂರ ಹಾಗೂ ಡಂಬಳ ಮಂಡಲಾಧ್ಯಕ್ಷರಾಗಿ ಮೇವುಂಡಿ ಗ್ರಾಮದ ಅಂದಪ್ಪ ಹಾರೂಗೇರಿ ಅವರನ್ನು ಪಕ್ಷದ ಹಿರಿಯರ, ಕೋರ್ ಕಮಿಟಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಕಪ್ಪ ಜಿ.ಬಂಡಿ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಚುನಾವಣಾಧಿಕಾರಿಗಳಾದ ಶಶಿಮೌಳಿ ಕುಲಕರ್ಣಿ, ಸಹ ಚುನಾವಣಾಧಿಕಾರಿಗಳಾದ ಎಂ.ಎಸ್. ಕರಿಗೌಡ್ರ, ನಿಂಗಪ್ಪ ಕೆಂಗಾರ, ಮಂಡಲ ಮಾಜಿ ಅಧ್ಯಕ್ಷ ಮುತ್ತು ಕಡಗದ, ರವಿ ಕರಿಗಾರ, ಬಿ.ಎಂ. ಸಜ್ಜನರ, ಬೀರಪ್ಪ ಬಂಡಿ, ಹನುಮಂತಪ್ಪ ಹಟ್ಟಿಮನಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಈಶ್ವರಪ್ಪ ರಂಗಪ್ಪನವರ, ಮಾಂತೇಶ ಸೊಮನಕಟ್ಟಿ, ವೆಂಕನಗೌಡ ಪಾಟೀಲ, ಶಿವಾನಂದ ಮಠದ, ಅಶೋಕ ವನ್ನಾಲ, ರಾಜೇಂದ್ರ ಘೊರ್ಪಡೆ, ಅಶೋಕ ಪವಾಡಶೆಟ್ಟರ, ನಾಗರಾಜ ಕಾಟ್ರಳ್ಳಿ, ಬಸವರಾಜ ಸಂಗನಾಳ, ಬಸವರಾಜ ಚನ್ನಳ್ಳಿ, ಶಂಕ್ರಯ್ಯ ಹಿರೇಮಠ, ಮುದಿಯಪ್ಪ ಕರಡಿ, ಶರಣಯ್ಯ ಹಿರೇಮಠ, ಬಾಲಾಜಿರಾವ್ ಬೊಸ್ಲೆ, ಉಮೇಶ ಪಾಟೀಲ, ಭಿಮಪ್ಪ ಮಾದರ, ಗುಡ್ಡಪ್ಪ ಮೂಲಿಮನಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.