ಚಿತ್ರದುರ್ಗ:- ಹೆರಿಗೆ ಆದ ಕೆಲವೇ ಕ್ಷಣದಲ್ಲಿ ಸತ್ತಿರುವ ಹೆಣ್ಣು ಶಿಶುವನ್ನು ಎಂಟು ದಿನಗಳಿಂದ ತಾಯಿಗೆ ತೋರಿಸದೆ ವೈದ್ಯರು ಮಹಾ ಎಡವಟ್ಟು ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.
Advertisement
ಮಗು ಸಾವಿನ ಕುರಿತು ಮಗುವಿನ ಪೋಷಕರಲ್ಲಿ ಅನುಮಾನ ಮೂಡಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಎಂಟು ದಿನಗಳ ಹಿಂದೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾಳಗೊಂಡನಹಳ್ಳಿ ನಿವಾಸಿ ಸಾಲಮ್ಮ ಎಂಬ ಮಹಿಳೆ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ಇದೀಗ ಮಗು ಮೃತಪಟ್ಟಿದ್ದು, ಜೀವಂತ ಮಗು ಕೊಡಿ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಡಾ. ಉಮಾ ಹಾಗೂ ಆಸ್ಪತ್ರೆ ಅಧಿಕಾರಿಗಳ ವಿರುದ್ದ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ನ್ಯಾಯ ಸಿಗುವವರೆಗೂ ಮೃತ ಮಗು ಬೇಡ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ.