ಶಕ್ತಿ ಯೋಜನೆಯಿಂದ ಸರ್ವರಿಗೂ ಅನುಕೂಲ

0
Shakti Yojana benefits everyone
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಶಕ್ತಿ ಯೋಜನೆ ಸರ್ವರಿಗೂ ಅನುಕೂಲವಾದ ಯೋಜನೆಯಾಗಿದೆ.

Advertisement

ಬಡವರು, ಶ್ರೀಮಂತರು ಎಂಬ ಬೇಧಭಾವವಿಲ್ಲದೆ ಎಲ್ಲರಿಗಾಗಿ ಜಾರಿಗೆ ತಂದ ಯೋಜನೆ ಇದಾಗಿದ್ದು, ಇದರಿಂದ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷೆ ರೂಪಾ ಅಂಗಡಿ ಹೇಳಿದರು.

ಅಬ್ಬಿಗೇರಿ ಗ್ರಾಮದ ಕಾಂಗ್ರೆಸ್ ಗ್ರಾಮ ಘಟಕ ಮತ್ತು ಮಹಿಳಾ ಘಟಕ ಏರ್ಪಡಿಸಿದ್ದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಗಾಗಿ ಸರಕಾರ ಎಷ್ಟು ಹಣವನ್ನು ವ್ಯಯಿಸಿತು ಎಂಬುದನ್ನು ಯೋಚಿಸುವ ಬದಲಾಗಿ ಅದನ್ನು ಯಾರಿಗಾಗಿ ವಿನಿಯೋಗಿಸಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ರಾಜ್ಯ ಸರಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅದೆಷ್ಟೋ ಕುಟುಂಬಗಳಿಗೆ ಅನುಕೂಲವಾಗಿದೆ ಎಂಬುದನ್ನು ಟೀಕಾಕಾರರು ಮೊದಲು ಅರಿಯಬೇಕು.

ಇದರಿಂದ ಮಹಿಳೆಯರಿಗೆ ಸ್ವವಲಂಬಿ ಬದುಕು ಸಿಕ್ಕಂತಾಗಿದೆ. ಈ ಗ್ಯಾರಂಟಿಗಳನ್ನು ಮಹಿಳೆಯರೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಸೋಮಕ್ಕ ಅವರೆಡ್ಡಿ, ವಾಸಂತಿ ಅವರೆಡ್ಡಿ, ಶಾರದಾ ಚಿತ್ತಾಪೂರ, ಸರೋಜಾ ಕಲ್ಲೇಶ್ಯಾಣಿ, ರೇಖಾ ಅವರೆಡ್ಡಿ, ಸುಶೀಲಾ ಐಹೊಳ್ಳಿ, ಚನ್ನವ್ವ ತಳವಾರ, ಲಲಿತಾ ರಾಠೋಡ, ಬಸವರಾಜ ಪಲ್ಲೇದ, ಭೀಮಣ್ಣ ಕಂಬಳಿ, ಸಕ್ರಗೌಡ ಪಾಟೀಲ, ಭೀಮಣ್ಣ ಚಿಕ್ಕೇನಕೊಪ್ಪ, ಮಲ್ಲಣ್ಣ ಕಲ್ಲೇಶ್ಯಾಣಿ, ಎಚ್.ಟಿ. ದ್ವಾಸಲ್, ಬಸವರಾಜ ತಳವಾರ, ಎ.ಕೆ. ಮಳಗಿ, ಸುರೇಶ ಶಿರೋಳ, ಎ.ಎಚ್. ಖಾದ್ರಿ, ತಿಮ್ಮರೆಡ್ಡಿ ಇಮ್ರಾಪೂರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here