ಗದಗ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಗದಗ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿ ಅಧ್ಯಕ್ಷರಾದ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರು, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಆನಂದಯ್ಯ ವಿರಕ್ತಮಠ, ಮಹಾಲಿಂಗಯ್ಯ ಹಿರೇಮಠ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
Advertisement
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ, ಬೂದಪ್ಪ ಅಂಗಡಿ, ಎಂ.ಕೆ. ಲಮಾಣಿ, ಪ್ರಕಾಶ ಅಸುಂಡಿ, ಬಸಣ್ಣ ಕೋಟಗಿ, ಸಿದ್ಧಲಿಂಗೇಶ ಸಜ್ಜನಶೆಟ್ಟರ, ಬಿ.ಕೆ. ನಿಂಬನಗೌಡರ, ಅಶೋಕ ಹಾದಿ, ಸುಲೋಚನಾ ಐಹೊಳಿ, ನರಗುಂದ ಸಾಲಿಯವರು, ಗಿರಿಜಾ ಹಸಬಿ, ಲಕ್ಷ್ಮೇಶ್ವರದ ಅರಳಿಹಳ್ಳಿ ಮುಂತಾದವರು ಭಾಗವಹಿಸಿದ್ದರು.


