ಚಲವಾದಿ ಗೌರಮ್ಮನವರ ಕೊಡುಗೆ ಅನನ್ಯ :ಶ್ರೀ ಶಾಂತಲಿಂಗ ಸ್ವಾಮಿಗಳು

0
Shivanubhava programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗೌರಮ್ಮ ಚಲವಾದಿಯವರು ಜನಪದ ಕೋಗಿಲೆ ಎಂದು ಜನಮನದಲ್ಲಿ ಪ್ರಸಿದ್ಧರಾದವರು. ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಗೌರಮ್ಮ ಚಲವಾದಿಯವರ ಕೊಡುಗೆ ಅನನ್ಯ ಮತ್ತು ಅನುಪಮವಾದುದು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2699ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಚಲವಾದಿ ಗೌರಮ್ಮನಲ್ಲಿರುವ ಕಲೆ, ಸಾಹಿತ್ಯ ಜ್ಞಾನ ಅಪಾರವಾದುದು. ಬದುಕಿನುದ್ದಕ್ಕೂ ಜನಪದ ಸಂಗೀತವನ್ನು ಹಾಡುತ್ತ ಜನಮನವನ್ನು ರಂಜಿಸುತ್ತಾ ಬಂದಿದ್ದಾರೆ. ಚಲವಾದಿ ಗೌರಮ್ಮನಲ್ಲಿರುವ ಜನಪದ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ, ಪ್ರೇರಣೆ ನಿಡಿ ನಾಡಿಗೆ ಪರಿಚಯಿಸಿಕೊಟ್ಟವರು ನಮ್ಮ ಗುರುಗಳಾದ ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಎಂದು ಸ್ಮರಿಸಿದರು.

Shivanubhava programme

ವೀರಣ್ಣ ಚನ್ನಪ್ಪ ಅಂಗಡಿ, ಅಡವಿಸೋಮಾಪೂರ ಜನಪದ ಸಂಗೀತ ಮತ್ತು ಶರಣಬಸಪ್ಪ ಹಳ್ಳಿ, ಸಿಂಧನೂರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಕು. ಶ್ರೇಯಾ ನಾಗರಾಜ ಮುನವಳ್ಳಿ, ವಚನ ಚಿಂತನೆಯನ್ನು ಕು. ತನುಷಾ ಚನ್ನಪ್ಪ ಮುನವಳ್ಳಿ ಇವರು ಮಾಡಿದರು. ಶಿವಾನುಭವದ ದಾಸೋಹ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದ ಮಲ್ಲಿಕಾರ್ಜುನ ಚಲವಾದಿ ಹಾಗೂ ಚಂದ್ರಕಲಾ ಮುನವಳ್ಳಿ ಪರಿವಾರದವರನ್ನು ಪೂಜ್ಯರು ಸಂಮಾನಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸರ್ವರನ್ನು ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

`ಜಾನಪದ ಕೋಗಿಲೆ ಶರಣೆ ಗೌರಮ್ಮ ಚಲವಾದಿ:ಜೀವನ ಮತ್ತು ಸಾಧನೆ’ ಕುರಿತು ಲಕ್ಷ್ಮಣ ಮೋಟೆ, ಅವರಾದಿ ಅವರು ಉಪನ್ಯಾಸ ನೀಡಿ, ಜನಪದ ಬಹುದೊಡ್ಡ ಸಾಗರ. ಈ ಸಾಗರದಲ್ಲಿ ಹಾಡು ಹಕ್ಕಿಯಾಗಿ, ಜನಪದದ ಕೋಗಿಲೆಯಾಗಿ ಮೆರೆದವರು ಚಲವಾದಿ ಗೌರಮ್ಮನವರು. ನಿರಕ್ಷರಿಯಾಗಿದ್ದ ಗೌರಮ್ಮನವರು ಸ್ವತಃ ಪದಗಳನ್ನು ಕಟ್ಟಿ, ಹಾಡುಗಳನ್ನು ಹಾಡಿ ಬಹು ಎತ್ತರಕ್ಕೆ ಬೆಳೆದಿದ್ದಾರೆ. ಜನಪದ ತತ್ವಪದಗಳನ್ನಷ್ಟೇ ಅಲ್ಲದೇ ಕಥೆಗಳನ್ನು ಕೂಡ ಹೇಳುತ್ತಿದ್ದರು ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here