ಜೂನ್ 15ರಂದು ಉಭಯ ಶ್ರೀಗಳ ಜಾತ್ರಾ ಮಹೋತ್ಸವ ಶಿವಾನುಭವಗೋಷ್ಠಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜೂನ್ 15ರಂದು ಸಂಜೆ 6 ಗಂಟೆಗೆ ಶಿವಾನುಭವಗೋಷ್ಠಿ ಕಾರ್ಯಕ್ರಮ ಜರುಗಲಿದೆ.

Advertisement

ಕಾರ್ಯಕ್ರಮದ ಸಾನ್ನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಮಹಾಸ್ವಾಮಿಗಳು ವಹಿಸುವವರು. ಚಿತ್ತರಗಿ-ಇಳಕಲ್ ಸಂಸ್ಥಾನ ಮಠದ ಪೂಜ್ಯಶ್ರೀ ಗುರು ಮಹಾಂತ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ತೋರಗಲ್ಲ ಗಚ್ಚಿನ ಹಿರೇಮಠದ ಪೂಜ್ಯಶ್ರೀ ಚೆನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು ನೇತೃತ್ವ ವಹಿಸುವರು.

ಗುಳೇದಗುಡ್ಡ ಮುರುಘಾಮಠದ ಪೂಜ್ಯಶ್ರೀ ಕಾಶೀನಾಥ ಮಹಾಸ್ವಾಮಿಗಳು, ಬೊಮ್ಮನಹಳ್ಳಿ ವಿರಕ್ತಮಠದ ಪೂಜ್ಯಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು, ಅಲಮೇಲ ಗುರು ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಚಂದ್ರಶೇಖರ ಶಿವಾಚಾರ್ಯರು, ಎಚ್.ಎಸ್. ವೆಂಕಟಾಪುರದ ಪೂಜ್ಯಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕೂಡಲ ಗುರುನಂಜೇಶ್ವರ ಮಠದ ಪೂಜ್ಯಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಲಿಂಗಸೂರಿನ ಮಾಣಿಕೇಶ್ವರಿ ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಎಸ್.ಎಸ್. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್, ಶಾಸಕ ಎನ್.ಹೆಚ್. ಕೋನರೆಡ್ಡಿ, ಪದ್ಮನಾಭ ಕುಂದಾಪುರ, ಪ್ರಕಾಶ ಹೊಸಮನಿ, ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್ನ ಸದಸ್ಯರುಗಳಾದ ಸಂಗಮೇಶ ದುಂದೂರ, ಪರಶುರಾಮ ಕಟ್ಟಿಮನಿ, ರಾಜು ರೇವಣಕರ, ಕೆ.ಟಿ. ಹಾಲಸ್ವಾಮಿ, ಎಂ.ಪಿ. ಓಂಕಾರೇಶ್ವರಿ, ನಾಗೇಶ ಮುಂಡಾಸ, ಅರುಣ ಕಟ್ಟಿಮನಿ, ಗದುಗಿನ ವಿಶಾಲ ಪವಾರ, ಬಾಲಚಂದ್ರ ತೊದಲಬಾಗಿ, ಎನ್.ರಾಮರಾವ್, ನೂರುದ್ದಿನ ಹಣಗಿ ಮುಂತಾದವರು ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ತುರುವಿಹಾಳದ ಕರಲಿಂಗಪ್ಪ ಹಳ್ಳಿ, ಬೆಳವಣಿಕೆಯ ರುದ್ರಪ್ಪ ಶಿವಸಿಂಪಿ, ಗೊಂಡಬಾಳದ ಮಂಜು ಉಮಾಚಗಿ ಬೆಳವಣಿಕೆಯ ಸುಭಾಷ ಶಿವಸಿಂಪಿ, ಆಲೂರಿನ ಸಂಗಯ್ಯಶಾಸ್ತ್ರಿಗಳು ಹಿರೇಮಠ, ಮಲ್ಲಣ್ಣ ಬೂದಿಹಾಳ, ಬಸವರಾಜ ಕೊಡಗಲಿ, ಮುತ್ತಪ್ಪ ವಾಲೀಕಾರ, ಭೀಮಣ್ಣ ಹಾದಿಮನಿ, ಎಚ್.ಈ.ಅಂಜನೇಯ, ಸಿದ್ಲಿಂಗಪ್ಪ ಶಿವಶಿಂಪಿ, ಬಸವರಾಜ ಹಳ್ಳಿಕೇರಿ, ಶಿವು ಭಜಂತ್ರಿ, ಮಲ್ಲು ಬೀಳಗಿ, ಮಲ್ಲಿಕಾರ್ಜುನ ಹಿರೇಗೌಡ್ರ, ಸಿದ್ದರಾಮ ಪಾಟೀಲ, ಮಲ್ಲಪ್ಪ ತುಂಬಗಿ ಅವರುಗಳನ್ನು ಸನ್ಮಾನಿಸಲಾಗುವುದು. ರಾತ್ರಿ 10 ಗಂಟೆಗೆ ಸಂಗೀತ ಸಭೆ ಸ್ವರ ಸಮಾರಾಧನೆ ಕಾರ್ಯಕ್ರಮ ಜರಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆಗೆ ಸನ್ಮಾನ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮದಲ್ಲಿ ಕಪೋತಗಿರಿ ನಂದಿವೇರಿ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅಡ್ನೂರ-ರಾಜೂರು ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಸಮ್ಮುಖ ವಹಿಸುವರು.


Spread the love

LEAVE A REPLY

Please enter your comment!
Please enter your name here