ಬೆಂಕಿ ಹಚ್ಚೋದ್ರಲ್ಲಿ ಶೋಭಾ ಕರಂದ್ಲಾಜೆ ನಿಸ್ಸೀಮರು: ಗುಂಡೂರಾವ್ ಕಿಡಿ!

0
Spread the love

ಬೆಂಗಳೂರು:- ಬೆಂಕಿ ಹಚ್ಚೋದ್ರಲ್ಲಿ ಶೋಭಾ ಕರಂದ್ಲಾಜೆ ನಿಸ್ಸೀಮರು ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

Advertisement

ನಾಗಮಂಗಲದ ಗಲಭೆ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅವರು, ಯಾರೇ ಈ ಥರ ಘಟನೆಗೆ ಕಾರಣವಾದ್ದರೂ ಶಿಕ್ಷೆ ಆಗಬೇಕು. ಇಂಥ ಘಟನೆ ಆಗಲು ಬಿಡಬಾರದು. ಘರ್ಷಣೆ ಹಿಂಸೆಗಳಿಂದ ಯಾರಿಗೂ ಲಾಭವಿಲ್ಲ. ಯಾರ ತುಷ್ಟೀಕರಣವೂ‌ ಇಲ್ಲ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಆಗಬೇಕು. ಕಾಂಪ್ರಮೈಸ್ ಆಗಬಾರದು ಎಂದು ತಿಳಿಸಿದ್ದಾರೆ.

ಪೊಲೀಸರೂ ಕೂಡ ಸ್ಪಷ್ಟವಾಗಿ ನೋಡಬೇಕಾಗುತ್ತದೆ. ಎಲ್ಲವನ್ನೂ ಕೂಡ ತನಿಖೆ ಮಾಡಬೇಕಾಗುತ್ತದೆ. ಪ್ರಚೋದನಕಾರಿ ಮಾತುಗಳು ಬೇಡ. ಲಕ್ಷಾಂತರ ಗಣಪತಿ ಕೂರಿಸ್ತಾರೆ. ಶೋಭಾ ಕರಂದ್ಲಾಜೆಯದ್ದೂ ಯಾವಾಗಲೂ ಇದೇ ಕಥೆ. ಬೆಂಕಿ ಹಚ್ಚುವುದರಲ್ಲಿ ಅವರೇ ಮುಂಚೂಣಿಯಲ್ಲಿರ್ತಾರೆ ಅಲ್ವ ಎಂದು ಕುಟುಕಿದ್ದಾರೆ.

ಕೋಮು ವೈಷಮ್ಯ ಹೆಚ್ಚು ಮಾಡುವುದಕ್ಕೇ ಬಿಜೆಪಿ ಇರುವುದು. ಬೇರೆ ಪ್ರಕರಣ ಆದರೆ ಬಿಜೆಪಿ ತಲೆ ಕೆಡಿಸಿಕೊಳ್ಳಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಜೆಪಿ ಮಾಡುತ್ತದೆ. ಎಲ್ಲ ಕಾಲದಲ್ಲಿ ಕೂಡ ಘಟನೆಗಳಾಗಿವೆ. ಸುಮ್ಮನೆ ಸುಳ್ಳು ಹೇಳುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here