ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 58ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ವಾರದಂತೆ ಈ ವಾರ ಕೂಡ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದರೆ ಈ ಬಾರಿ ಕೊಂಚ ವಿಭಿನ್ನ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ತ್ರೀವಿಕ್ರಮ್, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಾಮಿನೇಟ್ ಆಗಿದ್ದಾರೆ.
ಅದರಂತೆ ಈ ವಾರದ ಕಳಪೆ ಪಟ್ಟವನ್ನು ಶೋಭಾ ಶೆಟ್ಟಿಗೆ ಕೊಟ್ಟಿದ್ದಾರೆ. ಈ ವಾರ ನಿಮ್ಮ ಆಟದ ಪ್ರದರ್ಶನ ಕಡಿಮೆ ಎಂದೆನಿಸಿತು. ಅದಕ್ಕೆ ಕಳಪೆ ಪಟ್ಟ ಕೊಡುತ್ತಿದ್ದೇನೆ ಎಂದ ಧನರಾಜ್ ಮಾತಿಗೆ ಶೋಭಾ ಗರಂ ಆಗಿದ್ದಾರೆ. ನೀವ್ಯಾಕೆ ನನ್ನ ಟಾರ್ಗೆಟ್ ಮಾಡುತ್ತಿದ್ದೀರಾ? ಎಂದಿದ್ದಾರೆ. ಜೀವನದಲ್ಲಿ ಏನೇನೋ ಫೇಸ್ ಮಾಡಿದ್ದೇನೆ. ಇದು ಏನು ಅಲ್ಲ ನನಗೆ ಎಂದು ತಿರುಗೇಟು ನೀಡಿದ್ದಾರೆ ಶೋಭಾ. ಇಡೀ ಮನೆ ಅವರಿಗೆ ಕಳಪೆ ಕೊಟ್ಟಿರೋದು ಕೆಲ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.
ಅಮ್ಮಾ ಇವತ್ತು ನಾನು ಜೈಲಿಗೆ ಹೋಗ್ತಾ ಇದ್ದೀನಿ. ಅದನ್ನು ನೋಡಿ ನೀವು ಅಳಬೇಡಿ ಎಂದು ಶೋಭಾ ಕಣ್ಣೀರಿಟ್ಟಿದ್ದಾರೆ. ಇತ್ತ ನನ್ನ ನಿರ್ಧಾರ ತಪ್ಪಾಗಿದ್ಯಾ ಎಂದು ಗೊಂದಲದಲ್ಲಿದ್ದ ಧನರಾಜ್ಗೆ ನಿಮ್ಮ ನಿರ್ಧಾರ ಸರಿಯಾಗಿದೆ ಎಂದು ರಜತ್ ಸಲಹೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಬೆಳ್ಳಗೆ ಇರೋದೆಲ್ಲ ಹಾಲಲ್ಲ ಎಂದು ಶೋಭಾಗೆ ಕುಟುಕಿದ್ದಾರೆ. ಎಲ್ಲರೂ ನನಗೆ ಕಳಪೆ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಶೋಭಾ ಜೈಲಿನಲ್ಲಿ ಗಳಗಳನೆ ಅತ್ತಿದ್ದಾರೆ.