HomeKarnataka Newsಮದುವೆ ಆಗುತ್ತಿದ್ದವನಿಗೆ ಮಂಟಪದಲ್ಲೇ ಶಾಕ್: ನ್ಯಾಯ ಬೇಕೆಂದು ಕುಳಿತ ಸಂತ್ರಸ್ತೆ! ಆಗಿದ್ದೇನು?

ಮದುವೆ ಆಗುತ್ತಿದ್ದವನಿಗೆ ಮಂಟಪದಲ್ಲೇ ಶಾಕ್: ನ್ಯಾಯ ಬೇಕೆಂದು ಕುಳಿತ ಸಂತ್ರಸ್ತೆ! ಆಗಿದ್ದೇನು?

For Dai;y Updates Join Our whatsapp Group

Spread the love

ಚಿಕ್ಕಮಗಳೂರು:- ಲಿವಿಂಗ್ ರಿಲೇಷನ್‌ಶಿಪ್ ನಲ್ಲಿದ್ದ ಯುವತಿಗೆ ಮೋಸ ಮಾಡಿ ಮತ್ತೊಂದು ಮದುವೆ ಆಗುತ್ತಿದ್ದ ಯುವಕನಿಗೆ ಮಂಟಪದಲ್ಲೇ ಶಾಕ್ ಎದುರಾಗಿದೆ.

ಎಸ್, ಚಿಕ್ಕಮಗಳೂರಿನಲ್ಲಿ ನಡೆದಿರುವ ಘಟನೆ ಇದಾಗಿದೆ. ಶಿಕ್ಷಕ ಶರತ್ ತನ್ನ ಲಿವಿಂಗ್ ರಿಲೇಷನ್‌ಶಿಪ್‌ ಪಾರ್ಟ್‌ನರ್ ಅಶ್ವಿನಿಗೆ ಮೋಸ ಮಾಡಿ, ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಇಬ್ಬರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಕಾಲೇಜು ಮುಗಿದ ನಂತರವೂ ಇಬ್ಬರು ಸಂಪರ್ಕದಲ್ಲಿದ್ದರು. ಈ ವೇಳೆ ಶರತ್​​ ಮದುವೆ ಆಗಿ, ಪತ್ನಿಯಿಂದ ವಿಚ್ಛೇಧನ ಪಡೆದಿದ್ದ. ಇದರ ನಡುವೆ ಅಶ್ವಿನಿ ಜತೆಗೆ ಪ್ರೀತಿ ನಿವೇದನೆ ಮಾಡಿಕೊಂಡು ಮದುವೆ ಆಗುವೆ ಎಂದು ಭರವಸೆ ನೀಡಿದ್ದಾನೆ. ಇಬ್ಬರು 4 ವರ್ಷದಿಂದ ಪರಸ್ವರ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದರು. ಇದೀಗ ಅಶ್ವಿನಿಗೂ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ.

ಶರತ್​​ ನಾಳೆ ಅದ್ದೂರಿಯಾಗಿ (ಡಿ.14) ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾನೆ. ಮನೆಯ ಮುಂದೆ ಚಪ್ಪರ ಹಾಕಿಕೊಂಡು ಸಂಭ್ರಮದಲ್ಲಿದ್ದ ಶರತ್​ಗೆ ಅಶ್ವಿನಿ ಇದೀಗ ಬಿಗ್​ ಶಾಕ್​​ ನೀಡಿದ್ದಾಳೆ. ತನ್ನ ಪರ ವಕೀಲರನ್ನು ಶರತ್​ ಮನೆ ಬಳಿ ಕರೆದುಕೊಂಡು ಬಂದು ಶರತ್​​ಗೆ ಚಳಿಬಿಡಿಸಲು ಮುಂದಾಗಿದ್ದಾಳೆ. ಆದರೆ ಅಶ್ವಿನಿ ಮನೆ ಬಳಿ ಬರುತ್ತಿದ್ದಂತೆ ಶರತ್​ ಮನೆಯಿಂದ ಪರಾರಿಯಾಗಿದ್ದಾನೆ. ತನಗೆ ನ್ಯಾಯ ಸಿಗುವವರೆಗೆ ಇಲ್ಲಿಂದ ಹೋಗಲ್ಲ ಎಂದು ಹಠ ಹಿಡಿದು ಮನೆ ಮುಂದೆ ಪ್ರತಿಭಟನೆ ಮಾಡಿದ್ದಾಳೆ. ಅಶ್ವಿನಿ, ಶರತ್ ವಿರುದ್ಧ ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಶರತ್​ ಮೇಲೆ ಎಫ್​​​ಐಆರ್​​​ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!