ವಿಜಯಸಾಕ್ಷಿ ಸುದ್ದಿ, ಗದಗ : ಸೋಮವಾರ ಶ್ರೀ ಕೃಷ್ಣ ಜಯಂತಿ ಆಚರಣೆ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಮ್ ಹಾಲ್ನಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಭಗಾವನ್ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರನ್ನು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕಾ ಕಾರ್ಯದರ್ಶಿ ಶಿವಾಜಿ ಚವ್ಹಾಣ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗೊಲ್ಲ (ಯಾದವ) ಸಂಘದ ಅಧ್ಯಕ್ಷರಾದ ಹರೀಶ ಪೂಜಾರ, ಯಾದವ ಸಂಘದ ಅಧ್ಯಕ್ಷ ಭೀಮನಗೌಡ ಪಾಟೀಲ, ಶಂಕರಗೌಡ ಪಾಟೀಲ, ಶ್ರೀನಿವಾಸ ಭಂಡಾರಿ, ವೆಂಕಟೇಶ ಪೂಜಾರ, ಡಾ. ಆನಂದ ಪಾಟೀಲ, ಮಲ್ಲಪ್ಪಗೌಡ ಪಾಟೀಲ, ಪ್ರಕಾಶ ಪೂಜಾರ, ಗೋವಿಂದ ಪೂಜಾರ, ವಾಸು ಮೇಲ್ಮನಿ, ಈರಪ್ಪ ಬೇಲೇರಿ, ಪ್ರಶಾಂತ ಪೂಜಾರ, ಲಿಂಗರಾಜ ಸುರಣಗಿ, ಪ್ರವೀಣ ಪೂಜಾರ, ಶರಣಪ್ಪ ನಾಯ್ಕರ, ಪ್ರಶಾಂತ ಪೂಜಾರ, ಮೇಘರಾಜ ಮೇಲ್ಮನಿ, ಗಿರೀಶ ಪೂಜಾರ, ಪ್ರವೀಣ ಚಿಕ್ಕಹಂದಿಗೋಳ, ಯಲ್ಲಪ್ಪ ಪಾಟೀಲ, ಗೋವಿಂದ ಬಿಂಕದಕಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಮಾಜದ ಹಿರಿಯರು ಉಪಸ್ಥಿತರಿದ್ದರು.