ತುಮಕೂರು: ಈ ಸಾಮಾನ್ಯ ಸೋಮಣ್ಣ ಈ ಮಟ್ಟಕ್ಕೆ ಬೆಳೆಯಲು ಸಿದ್ದಗಂಗಾ ಮಠ ಕಾರಣ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ 6 ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಮಾತನಾಡಿದ ಅವರು,
ನಡೆದಾಡುವ ದೇವರು ಈ ರಾಷ್ಟ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ದನಿ ಇಲ್ಲಸವರಿಗೆ ದನಿಯಾಗಿ, ತ್ರಿವಿಧ ದಾಸೋಹ ಕೊಟ್ಟಿದ್ದಾರೆ. ಇಡೀ ವಿಶ್ವಕ್ಕೆ ಮಾದರಿಯಾಗಿ ದೇಹ ತ್ಯಾಗ ಮಾಡಿದ್ದಾರೆ. ಸೂರ್ಯ ಚಂದ್ರ ಇರೋವರೆಗೂ ಇಡೀ ಭೂಪಟದಲ್ಲಿ ಶಿವಕುಮಾರ್ ಶ್ರೀಗಳ ಹೆಸರು ಇರುತ್ತದೆ.
ಕಸ್ತೂರಿ ಮಾತ್ರೆ ಮಾರುತಿದ್ದ ಈ ಸಾಮಾನ್ಯ ಸೋಮಣ್ಣ ಈ ಮಟ್ಟಕ್ಕೆ ಬೆಳೆಯಲು ಸಿದ್ದಗಂಗಾ ಮಠ ಕಾರಣ. ದಾಸೋಹ ದಿನ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಘೋಷಣೆ ಆಗಿಯೇ ಉಳಿದಿದೆ.
ಆದರೆ ಈ ಸರ್ಕಾರ ಅದನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿಲ್ಲ. ಈ ಬಗ್ಗೆ ಸಿಎಂ, ಜಿ ಪರಮೇಶ್ವರ್, ಕೆ ಎನ್ ರಾಜಣ್ಣಗೆ ಪತ್ರ ಬರೆಯುತ್ತೇನೆ. ದಾಸೋಹ ದಿನವನ್ನು ಇಡೀ ರಾಜ್ಯದಲ್ಲಿ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.