ಹಾಸನ: ಸಿದ್ದರಾಮಯ್ಯ ಒಂದು ತಪ್ಪನ್ನು ಮುಚ್ಚಿಕೊಳ್ಳಲು, ನೂರಾರು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಂದು ತಪ್ಪನ್ನು ಮುಚ್ಚಿಕೊಳ್ಳಲು, ನೂರಾರು ತಪ್ಪುಗಳನ್ನು ಮಾಡುತ್ತಿದ್ದಾರೆ. ಜನರಲ್ಲಿ ಇರುವ ಸಾಮರಸ್ಯಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳಬೇಕು ಎಂದರು.
ವಸತಿ ಇಲಾಖೆ ಪವಿತ್ರವಾದ ಇಲಾಖೆ. ನಾನು ವಸತಿ ಸಚಿವನಾಗಿ ಲಕ್ಷಾಂತರ ಕುಟುಂಬಗಳಿಗೆ ನಿವೇಶನ ನೀಡಿದ್ದೇನೆ. ಜಮೀರ್ ಅಹಮದ್ ಮೊದಲು ಕಚೇರಿಯಲ್ಲಿ ಕೂರಲಿ. ಯಾವ ಆಧಾರದ ಮೇಲೆ ಕೊಡುತ್ತೀರಿ?
ಯಾರಾದರೂ ಕೋರ್ಟ್ಗೆ ಹೋದರೆ ಎಷ್ಟು ಛೀಮಾರಿ ಹಾಕುತ್ತೆ. ಅನಾವಶ್ಯಕವಾಗಿ ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುತ್ತೀರಿ, ಇದೇ ನಿಮ್ಮ ಚಾಳಿ. ಇದಕ್ಕೆ 125 ವರ್ಷ ಕಾಂಗ್ರೆಸ್ಗೆ ಬೇಕಾ? ಇಂತಹ ಕಾಂಗ್ರೆಸ್ ಈ ದೇಶದಲ್ಲಿ ಇದೇ ಎಂದುಕೊಳ್ಳಲು ಅಸಹ್ಯವಾಗುತ್ತೆ. ಇದರ ಅವಶ್ಯಕತೆ ಇಲ್ಲ ಎಂದರು.