ಸಿದ್ದರಾಮಯ್ಯನವೃೇ ರೈತರ ಭೂಮಿ‌ ಬಿಡಿಸಿಕೊಡಿ, ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ: ಕೆಎಸ್. ಈಶ್ವರಪ್ಪ

0
Spread the love

ಶಿವಮೊಗ್ಗ: ಸಿದ್ದರಾಮಯ್ಯನವೃೇ ರೈತರ ಭೂಮಿ‌ ಬಿಡಿಸಿಕೊಡಿ, ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ ಎಂದು  ಮಾಜಿ ಸಚಿವ ಕೆಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರೇ ಬೀರ ದೇವರ ಗುಡಿಯನ್ನು ಕುರುಬರಿಗೆ ಉಳಿಸಿಕೊಡಿ, ಮುಸ್ಲಿಂರಿಗೆ ಕೊಡಬೇಡಿ. ನಿಮಗೆ ರೈತರ, ಬೀರ ದೇವರ ಶಾಪ ತಟ್ಟುತ್ತದೆ. ಶಾಪ ತಟ್ಟಬಾರದು ಅಂದರೆ ರೈತರ ಭೂಮಿ ಉಳಿಸಿಕೊಡಿ.

Advertisement

ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ, ಹಾಸನಾಂಬೆ ಆಶೀರ್ವಾದ ನಿಮಗೆ ಸಿಗಬೇಕು ಅಂದ್ರೆ ನೀವು ರೈತರ ಭೂಮಿ‌ ಬಿಡಿಸಿಕೊಡಿ. ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ. ಉಪ ಚುನಾವಣೆ ವಿಚಾರದ ಬಗ್ಗೆ ಮಾತನಾಡಿ, ರೈತರ ಆಸ್ತಿ ಬಿಟ್ಟು ಹೋಗಬಾರದು ಅಂದ್ರೆ‌ ಕಾಂಗ್ರೆಸ್ ಸೋಲಿಸಿ, ಹಿಂದುಪರ ಇರುವ ವ್ಯಕ್ತಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

ಇನ್ನೂ ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರಕಾರ ಅನ್ನಲ್ಲ. ರಾಜ್ಯದಲ್ಲಿ ಇರೋದು ಮುಸ್ಲಿಂ ಸರಕಾರ, ಜಮೀರ್ ಅಹಮದ್ ಸರಕಾರ. ಮಠ ಮಾನ್ಯಗಳ ಆಸ್ತಿ, ದೇವಸ್ಥಾನದ  ಆಸ್ತಿ ವಕ್ಪ್ ಅಂತಾ ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. ನಿಮ್ಮ ನೋಟೀಸ್‌ಗೆ ಏನು ಬೆಲೆ ಇದೆ? 2018ರಲ್ಲಿ ಯರಕಲ್ ಸಿದ್ದರಾಮ ಮಠಕ್ಕೆ ವಕ್ಫ್ ಆಸ್ತಿ ಅಂತಾ ನೋಟೀಸ್ ಕೊಟ್ಟಿದ್ದಾರೆ. ವಕ್ಪ್ ಅಧಿಕಾರಿಗಳಿಗೆ ಜಮೀರ್ ಅಹಮದ್ ಸಿಎಂ ಆಗಿದ್ದಾನೆ ಎಂದು ಕಿಡಿಕಾರಿದರು.

 

 


Spread the love

LEAVE A REPLY

Please enter your comment!
Please enter your name here