ಬೆಂಗಳೂರು: ಸಿದ್ದರಾಮಯ್ಯ ಸಿಎಂ ಸ್ಥಾನ ಫಿಕ್ಸ್. ಸೆಪ್ಟೆಂಬರ್ ನಲ್ಲಿ ಯಾವ ಕ್ರಾಂತಿಯೂ ಇಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಕ್ರಾಂತಿ ಏನು ಅಂತ ರಾಜಣ್ಣಗೆ ಕೇಳಬೇಕು.
Advertisement
ಯಾವುದೇ ಕ್ರಾಂತಿಯೂ ಆಗಲ್ಲ. ಸಿಎಂ ಸ್ಥಾನ ಬದಲಾವಣೆಯಂತೂ ಆಗುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪವರ್ ಸೆಂಟರ್ ಜಾಸ್ತಿ ಆಗಿವೆ ನಿಜ. ಸಿದ್ದರಾಮಯ್ಯಗೂ ವಯಸ್ಸಾಯ್ತಲ್ಲ. ಆದ್ರೆ ಸಿದ್ದರಾಮಯ್ಯ ನಾಟ್ ಎ ವೀಕ್ ಚೀಫ್ ಮಿನಿಸ್ಟರ್. ಕೆಲವೊಮ್ಮೆ ಇನ್ನೊಂದು ಪವರ್ ಸೆಂಟರ್ ಗಳ ಮಾತು ಕೇಳಬೇಕಾಗುತ್ತದೆ.
ಆದರೆ 2 ವರ್ಷ 11 ತಿಂಗಳು ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಎಂದರು. ನಾವೆಲ್ಲ ಸಿಎಂ ಸಿದ್ದರಾಮಯ್ಯ ಅವರನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ. ಹಳೆಯ ಸ್ಟೈಲ್ ನಲ್ಲಿ ಆಡಳಿತ ಮಾಡಿ ಅಂತ ನಾವೂ ಹೇಳ್ತಿದ್ದೇವೆ ಎಂದು ತಿಳಿಸಿದರು.